Advertisement

ಆರ್‌ಟಿಒ ತೆರಿಗೆ ವಂಚನೆ: ಆರೋಪಿ ಬಂಧನ

11:40 AM Oct 20, 2021 | Team Udayavani |

ಬೆಂಗಳೂರು: ಅಂತಾರಾಜ್ಯದಲ್ಲಿ ಖರೀದಿಸಿದ ವಾಹನಗಳ ನಂಬರ್‌ಗೆ ಕಟ್ಟಬೇಕಾದ ತೆರಿಗೆಯನ್ನು ವಂಚಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದ ಆರೋಪಿಯೊಬ್ಬ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

Advertisement

ಹೊಸೂರು ನಿವಾಸಿ ಗಿರೀಶ್‌(27) ಬಂಧಿತ. ಆರೋಪಿ ಇಂದಿರಾನಗರದ ಆರ್‌ಟಿಒ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾನೆ. ಈ ವೇಳೆ ಬೇರೆ ರಾಜ್ಯದಲ್ಲಿ ವಾಹನಗಳನ್ನು ಖರೀದಿಸಿದ ಮಾಲೀಕರು, ನಗರಕ್ಕೆ ಬಂದು ವಾಹನಗಳ ದಾಖಲೆಗಳನ್ನು ಕೊಟ್ಟು ನೊಂದಾಯಿಸಿ ತೆರಿಗೆ ಕಟ್ಟಬೇಕು.

ಆದರೆ, ಆರೋಪಿ ಗಿರೀಶ್‌, ಅಂತಹ ಮಾಲೀಕರಿಂದ ತೆರಿಗೆ ಹಣ ಪಡೆದು ಸರ್ಕಾರಕ್ಕೆ ಪಾವತಿಸದೆ, ತನ್ನ ಖಾತೆಗೆ ಜಮೆ ಮಾಡಿಕೊಳ್ಳುತ್ತಿದ್ದ.

ಅಲ್ಲದೆ, ಅಂತಾರಾಜ್ಯ ವಾಹನಗಳ ನಂಬರ್‌ಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ರಾಜ್ಯದ ನೋಂದಣಿ ನಂಬರ್‌ಗಳನ್ನು ಉಲ್ಲೇಖೀಸಿ ತೆರಿಗೆ ವಂಚನೆ ಮಾಡುತ್ತಿದ್ದ. ಈ ಸಂಬಂಧ ಆರ್‌ಟಿಒ ಅಧಿಕಾರಿಗಳು ದೂರು ನೀಡಿ ದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈ ಹಿಂದೆಯೂ ಆರೋಪಿ ಸಾಕಷ್ಟು ಪ್ರಕರ ಣದಲ್ಲಿ ಭಾಗಿಯಾಗಿದ್ದು ವಿಚಾರಣೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next