Advertisement

ಆರ್‌ಟಿಇ: ಹೆಚ್ಚುವರಿ ಹಣಕ್ಕೆ ಬೇಡಿಕ

12:50 PM Jun 07, 2018 | |

ದೇವನಹಳ್ಳಿ: ಖಾಸಗಿ ಶಾಲೆಯೊಂದರಲ್ಲಿ ಆರ್‌ಟಿಇ ಅಡಿ ಸೀಟು ಪಡೆದು ದಾಖಲಾಗುವ ಮಕ್ಕಳಿಗೆ ಹೆಚ್ಚುವರಿ ಹಣ ಪಾವತಿ ಮಾಡಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಬಿ.ಬಿ. ರಸ್ತೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಪೋಷಕ ಹನುಮಂತೇ ಗೌಡ ಮಾತನಾಡಿ, ತಾಲೂಕಿನ ಆಲೂರುದುದ್ದನಹಳ್ಳಿ ಬಳಿ ಇರುವ ಖಾಸಗಿ ಶಾಲೆಯಲ್ಲಿ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ಹೊರತು ಪಡಿಸಿ ಹೆಚ್ಚುವರಿಯಾಗಿ 5800 ರೂ. ಹಣ ಪಾವತಿಸಬೇಕು ಎಂದು ಬೇಡಿಕೆ ಇಟ್ಟಿದ್ದು, ಹಣ ಸಂದಾಯ ಮಾಡಿದ್ದಕ್ಕೆ ರಸೀದಿ ನೀಡುವಂತೆ ಕೇಳಿದರೆ ರಸೀದಿ ನೀಡಲಾಗುವುದಿಲ್ಲ.

ಹಣ ಪಾವತಿಸುವುದು ಕಡ್ಡಾಯ ಎಂದು ಹೇಳುತ್ತಾರೆ. ಸರ್ಕಾರ ಆರ್‌ಟಿಇ ಮಾಡಿರುವ ಉದ್ದೇಶ ಬಡ ವಿದ್ಯಾರ್ಥಿಗಳಿಗೆ ಅನುಕೂ ಲವಾಗುವ ಉದ್ದೇಶದಿಂದ ಮಾಡಿದೆ. ಅದೇ ಆರ್‌ಟಿಇ ಹಣವನ್ನು ಸರ್ಕಾರ ಮಕ್ಕಳ ವಾರ್ಷಿಕ ಶುಲ್ಕವನ್ನು ಸರ್ಕಾರಿ ಶಾಲೆಗಳಿಗೆ ನೀಡಿದರೆ ಮತ್ತಷ್ಟು ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗುತ್ತದೆ. ಇಂತಹ ಕಾನೂನು ಗಳಿಂದ ಖಾಸಗಿ ಶಾಲೆಗಳಿಗೆ ಲಾಭವಾಗುತ್ತಿದೆ. ಕೂಡಲೇ ಸರ್ಕಾರ ಆರ್‌ ಟಿಇ ಅನ್ನು ತೆಗೆದು ಹಾಕಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಈ ಹಣವನ್ನು ಸದುಪಯೋಗ ಮಾಡಲಿ ಎಂದು ಒತ್ತಾಯಿಸಿದರು.

ಪೋಷಕ ನಾರಾಯಣಸ್ವಾಮಿ ಮಾತನಾಡಿ, 11 ದಿನಗಳ ಹಿಂದೆ ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖೀತವಾಗಿ ಮನವಿ ಮಾಡಲಾಗಿದೆ. ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಮಕ್ಕಳ ಶುಲ್ಕ ಭರಿಸುವಾಗ ಹೆಚ್ಚುವರಿ ಶುಲ್ಕಕ್ಕೆ ಏಕೆ ಬೇಡಿಕೆ ಇಡಬೇಕು.
 
ಪ್ರತಿಯೊಂದು ಶಾಲೆಯವರು ಶುಲ್ಕ ನಿಗದಿ ಪಡಿಸಿದ್ದರೂ ಸಹ ಹೆಚ್ಚುವರಿಯಾಗಿ ಪಾವತಿಸಬೇಕು. ಮಕ್ಕಳ ಜೀವನದ ಜೊತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಚೆಲ್ಲಾಟವಾಡುತ್ತಿದೆ. ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. 

ಬಹುಜನ ವಿದ್ಯಾರ್ಥಿ ಸಮಿತಿಯ ಜಿಲ್ಲಾ ಸಂಯೋಜಕ ವಕೀಲ ಮಹೇಶ್‌ ದಾಸ್‌ ಮಾತನಾಡಿ, ಆರ್‌ಟಿಇ ಅಡಿಯಲ್ಲಿ
ಓದುತ್ತಿರುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಮಾನಸಿಕ ತೊಂದರೆಗೆ ಒಳಪಡಬಾರದು ಎಂಬ ದೃಷ್ಟಿಯಲ್ಲಿ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ಕೆಲ ಖಾಸಗಿ ಶಾಲೆಗಳು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆರ್‌ಟಿಇ ಮಕ್ಕಳ ಪೋಷಕರಿಂದ 5800 ರೂ.ಗಳ ಹೆಚ್ಚುವರಿ ರಸೀದಿ ರಹಿತ ಶುಲ್ಕವನ್ನು ಕಟ್ಟುವಂತೆ ಬೇಡಿಕೆ ಇಡುತ್ತಾರೆ.

Advertisement

ಶಾಲೆಯಲ್ಲಿ ಆರ್‌ಟಿಇ ಮಕ್ಕಳಿಗೆ ಪ್ರತ್ಯೇತಕವಾಗಿ ಕಾಣಲಾಗುತ್ತಿದೆ. ಹಲವಾರು ಮಕ್ಕಳು ಇದರಿಂದ ಮಾನಸಿಕ
ಹಿಂಸೆ ಪಡುತ್ತಿದ್ದಾರೆ. ನಮ್ಮ ಜಿಲ್ಲಾ ಬಹುಜನ ವಿದ್ಯಾರ್ಥಿ ಸಮಿತಿಗೆ ಪೋಷಕರು ಮಾಹಿತಿ ನೀಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡಲೇ ಗಮನ ಹರಿಸಬೇಕು ಎಂದು ಆಗ್ರಹಿಸಿದರು. 

ಪೋಷಕರಾದ ನಾರಾಯಣಸ್ವಾಮಿ, ಸಿ. ಮಂಜುನಾಥ್‌, ಮುನಿಕೆಂಪಣ್ಣ, ಡಿ.ಎಂ. ಮಂಜುನಾಥ, ದುಗ್ಗೇಶ್‌, ಎ.ಎಂ.
ಮಂಜು ನಾಥ್‌, ಲಕ್ಷ್ಮಣ್‌, ಮುನಿರಾಜು ಇತರರು ಇದ್ದರು.  ಆರ್‌ಟಿಇ ಅಡಿ ಖಾಸಗಿ ಶಾಲೆಯಲ್ಲಿ 5800ರೂ. ಹಣ
ಬೇಡಿಕೆ ಇಟ್ಟಿರುವುದು ಪೋಷಕರು ತಮ್ಮ ಗಮನಕ್ಕೆ ತಂದಿದ್ದಾರೆ. ದೂರ ವಾಣಿ ಮುಖಾಂತರ ಕರೆ ಮಾಡಿ
ವಿಚಾರಿಸಿದ್ದೇನೆ. ಕಾರಣ ಕೇಳಿ ನೋಟಿಸ್‌ ಸಹ ನೀಡಲಾಗುತ್ತಿದೆ. ನಾನು ಯಾರ ಪರ ಅಲ್ಲ. ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗುವುದೇ ನನ್ನ ಕರ್ತವ್ಯವಾಗಿದೆ. ಮಕ್ಕಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುತ್ತಿದೆ. ಮುಖಾ ಮುಖೀ ಇಬ್ಬರನ್ನು ಕೂರಿಸಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. 
ಗಾಯಿತ್ರಿದೇವಿ, ಕ್ಷೇತ್ರ ಶಿಕ್ಷಣಾಧಿಕಾರಿ 

Advertisement

Udayavani is now on Telegram. Click here to join our channel and stay updated with the latest news.

Next