Advertisement

ಆರ್‌ಎಸ್‌ಎಸ್‌ ಕಾರ್ಯಕರ್ತ ಶತಾಯುಷಿ ಗಂಗಾದಯಾಳ್‌ ಅವಸ್ಥಿ ನಿಧನ

10:46 AM Feb 18, 2017 | Team Udayavani |

ಥಾಣೆ : ಪ್ರಖ್ಯಾತ ಸಮಾಜ ಸೇವಕ, ಹಿರಿಯ ಆರ್‌ಎಸ್‌ಎಸ್‌ ಕಾರ್ಯಕರ್ತ, ಶತಾಯುಷಿ ಗಂಗಾದಯಾಳ್‌ ಅವಸ್ಥಿ  ಅವರು ನಿನ್ನೆ ಶುಕ್ರವಾರ ಇಲ್ಲಿನ ತಮ್ಮ ನಿವಾಸದಲ್ಲಿ ನಿಧನ ಹೊಂದಿದರೆಂದು ಅವರ ಕುಟುಂಬದವರು ತಿಳಿಸಿದ್ದಾರೆ.

Advertisement

ಮೂಲತಃ ಉತ್ತರ ಪ್ರದೇಶದವರಾದ ಅವಸ್ಥಿ ಅವರು ಸುಮಾರು 30 ವರ್ಷಗಳ ಹಿಂದೆ ಥಾಣೆಗೆ ವಲಸೆ ಬಂದಿದ್ದರು. ಇವರು ಹಿರಿಯ ಆರ್‌ಎಸ್‌ಎಸ್‌ ನಾಯಕರಾದ ಗುರು ಗೋಲ್ವಾಲ್ಕರ್‌, ಶ್ಯಾಮ್‌ಪ್ರಸಾದ್‌ ಮುಖರ್ಜಿ, ದೀನದಯಾಳ್‌ ಉಪಾಧ್ಯಾಯ ಮತ್ತು ಅಟಲ್‌ ಬಿಹಾರಿ ವಾಜಪೇಯಿ ಸೇರಿದಂತೆ ಹಲವು ನಾಯಕರಿಗೆ ಅತ್ಯಂತ ನಿಕಟರಾಗಿದ್ದರು. 

ಈಚೆಗಷ್ಟೇ ಅವಸ್ಥಿ ಅವರನ್ನು ಕಾಶೀ ಸುಮೇರು ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನರೇಂದ್ರಾನಂದ ಸರಸ್ವತಿ ಅವರಿಂದ ಸಮ್ಮಾನಿತರಾಗಿದ್ದರು. 

ನಿನ್ನೆ ರಾತ್ರಿ ನಡೆದಿದ್ದ  ಅವಸ್ಥಿ ಅವರ ಅಂತ್ಯಕ್ರಿಯೆಯಲಿಲ ಸಮಾಜದ ಎಲ್ಲ ವರ್ಗಗಳ ಜನರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next