Advertisement

ಅಸ್ಸಾಂ ಎನ್‌ಆರ್‌ಸಿ ಪ್ರಕಟನೆ: ರಾಜ್ಯಸಭೆಯಲ್ಲಿ ಗದ್ದಲ, ಮುಂದೂಡಿಕೆ

12:07 PM Jul 30, 2018 | udayavani editorial |

ಹೊಸದಿಲ್ಲಿ : ಅಸ್ಸಾಂ ಪ್ರಜೆಗಳ ರಾಷ್ಟ್ರೀಯ ದಾಖಲೆ (ಎನ್‌ಆರ್‌ಸಿ) ಪ್ರಕಟನೆಯನ್ನು ಪ್ರತಿಭಟಿಸಿ ಟಿಎಂಸಿ ಮತ್ತು ಸಮಾಜವಾದಿ ಪಕ್ಷದ ನೇತೃತ್ವದಲ್ಲಿ ವಿರೋಧ ಪಕ್ಷಗಳು ಇಂದು ರಾಜ್ಯಸಭೆಯಲ್ಲಿ ಭಾರೀ ಗದ್ದಲ ಎಬ್ಬಿಸಿದ ಕಾರಣ ಸದನದ ಕಲಾಪವನ್ನು ಮಧ್ಯಾಹ್ನದ ವರೆಗೆ ಮುಂಡೂಲಾಯಿತು.

Advertisement

ಇಂದು ಸೋಮವಾರ ಬೆಳಗ್ಗೆ ರಾಜ್ಯಸಭಾ ಕಲಾಪ ಆರಂಭವಾದಾಗ ಸದನದ ಮಾಜಿ ಸದಸ್ಯರೊಬ್ಬರ ನಿಧನಕ್ಕೆ ಶೋಕ ಪ್ರಕಟಿಸಲಾಯಿತು. ಅನಂತರ ದಿನದ ಕಲಾಪದ ಪಟ್ಟಿಯನ್ನು ಮಂಡಿಸಲಾಯಿತು. ಆಗಲೇ ತಮ್ಮ ನಾಯಕ ಡೆರೆಕ್‌ ಓ ಬ್ರಿನ್‌ ನೇತೃತ್ವದಲ್ಲಿ  ಎನ್‌ಆರ್‌ಸಿ ವಿಷಯವನ್ನು ಎತ್ತಿ ಪ್ರತಿಭಟಿಸಲು ಟಿಎಂಸಿ ಸದಸ್ಯರು ತುದಿಕಾಲಲಲ್ಲಿ ನಿಂತಿದ್ದರು. 

ಆಗ ಎಸ್‌ಪಿ ಸದಸ್ಯರು ಮತ್ತು ಕೆಲ ಕಾಂಗ್ರೆಸ್‌ ಸದಸ್ಯರು ಘೋಷಣೆ ಕೂಗಲು ತೊಡಗಿದರು. ಪರಿಣಾಮವಾಗಿ ಸದನದಲ್ಲಿ  ಭಾರೀ ಗುಲ್ಲು ತುಂಬಿಕೊಂಡಿತು. 

ಎನ್‌ಆರ್‌ಸಿ ವಿಷಯವನ್ನು ಎತ್ತುವ ಬಗ್ಗೆ ತನಗೆ ನೊಟೀಸ್‌ ಸಿಕ್ಕಿಲ್ಲ ಎಂದು ಆಗ ಹೇಳಿದ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಅವರು “ಕೆಲವು ಸದಸ್ಯರು ನನ್ನನ್ನು ಬೆಳಗ್ಗೆ ಭೇಟಿಯಾಗಿ ಎನ್‌ಆರ್‌ಸಿ ವಿಷಯ ಎತ್ತಲು ತಾವು ಬಯಸಿರುವುದಾಗಿ ಹೇಳಿದ್ದರು’ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next