Advertisement

ಎಟಿಎಂನಿಂದ 6.12 ಲಕ್ಷ ರೂ. ಕಳ್ಳತನ 

06:30 AM Jul 02, 2018 | |

ಕಲಬುರಗಿ: ಗ್ಯಾಸ್‌ ಕಟರ್‌ನಿಂದ ಆ್ಯಕ್ಸಿಸ್‌ ಬ್ಯಾಂಕ್‌ ಎಟಿಎಂ ಕಟ್‌ ಮಾಡಿ ಅದರಲ್ಲಿದ್ದ 6,12,800 ರೂ. ನಗದು ದೋಚಿದ ಘಟನೆ ಕಮಲಾಪುರ ಬಳಿಯ ಹೆದ್ದಾರಿ ಹತ್ತಿರವಿರುವ ಗುರು ಮಾಟೂರ ಕಾಂಪ್ಲೆಕ್ಸ್‌ನಲ್ಲಿ ನಡೆದಿದೆ.

Advertisement

ಕಳ್ಳರು ಎಟಿಎಂ ಇರುವ ಹಿಂದಿನ ಕೋಣೆಯಲ್ಲಿ ಎಟಿಎಂಗೆ ಅಳವಡಿಸಿದ್ದ ಡಿವಿಆರ್‌ ಸಂಪರ್ಕ ಕತ್ತರಿಸಿ ಹೋಗಿದ್ದಾರೆ ಎನ್ನಲಾಗಿದೆ. ಅಲ್ಲದೇ ಎಟಿಎಂ ಮೇಲ್ಗಡೆ ಇರುವ ಮುಂಬೈ ಮೂಲದ ಮನಿ ಸ್ಪಾಟ್‌ ಹಿಟಾಚಿ ಪೇಮೆಂಟ್‌ ಸರ್ವಿಸಸ್‌ ಎಟಿಎಂ ಮಷಿನ್‌ ಇದ್ದ ಶಟರ್‌ನಲ್ಲಿ ಹೋಗಿ ಕಳ್ಳರು ಯಂತ್ರಕ್ಕೆ ಹಾನಿ ಮಾಡಿದ್ದು, ಯಾವುದೇ ಕಳ್ಳತನವಾಗಿಲ್ಲ. ಈ ಸಂಬಂಧ ಆ್ಯಕ್ಸಿಸ್‌ ಬ್ಯಾಂಕ್‌ ಎಟಿಎಂ ಸೂಪರ್‌ವೈಜರ್‌ ಹುಬ್ಬಳ್ಳಿಯ ವಿದ್ಯಾನಗರದ ಚೇತನಾ ಕಾಲೋನಿಯ ಸಂದೀಪ ಕೃಷ್ಣಾಜಿ ಕುಲಕರ್ಣಿ ಕಮಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next