Advertisement

ಪೌರ ಕಾರ್ಮಿಕರಿಗೆ 21 ಲಕ್ಷ ರೂ. ನೀಡಿದ ಮೋದಿ

12:30 AM Mar 07, 2019 | Team Udayavani |

ಹೊಸದಿಲ್ಲಿ: ಇತ್ತೀಚೆಗೆ ಕುಂಭಮೇಳದಲ್ಲಿ ಸ್ವಚ್ಛತಾ ಕಾರ್ಯಕರ್ತರ ಪಾದ ತೊಳೆದು ಸನ್ಮಾನಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಇದೀಗ ಅವರ ಕಲ್ಯಾಣಕ್ಕಾಗಿ 21 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ತನ್ನ ಉಳಿತಾಯದ ಮೊತ್ತದಿಂದ ಈ ಹಣವನ್ನು ಮೋದಿ ನೀಡಿದ್ದಾರೆ. ಈ ಹಿಂದೆಯೂ ಈ ರೀತಿ ಹಲವು ದೇಣಿಗೆಯನ್ನು ಅವರು ನೀಡಿದ್ದರು. ಇತ್ತೀಚೆಗೆ ಸಿಯೋಲ್‌ ಶಾಂತಿ ಪ್ರಶಸ್ತಿ ಪಡೆದಿದ್ದಾಗ 1.3 ಕೋಟಿ ರೂ. ಪ್ರಶಸ್ತಿ ಮೊತ್ತವನ್ನು ನಮಾಮಿ ಗಂಗೆ ಯೋಜನೆಗೆ ನೀಡಿದ್ದರು. ಅದೇ ರೀತಿ ಅವರಿಗೆ ಬಂದ ಉಡುಗೊರೆಗಳನ್ನು ಹರಾಜು ಹಾಕಿದ್ದರಿಂದ ಲಭ್ಯವಾದ 3.40 ಕೋಟಿ ರೂ.ಗಳನ್ನೂ ಗಂಗೆ ಶುದ್ಧೀಕರಣ ಯೋಜನೆಗೆ ನೀಡಿದ್ದರು.

Advertisement

ಈ ಹಿಂದೆ 2015ರಲ್ಲಿ ನಡೆಸಿದ ಹರಾಜಿನಿಂದ ಬಂದ 8.33 ಕೋಟಿ ರೂ.ಗಳನ್ನೂ ಮೋದಿ ದೇಣಿಗೆ ನೀಡಿದ್ದರು. ಅ ಗುಜರಾತ್‌ ಸರಕಾರದ ಉದ್ಯೋಗಿಗಳ ಹೆಣ್ಣುಮಕ್ಕಳ ಶಿಕ್ಷಣ ಕ್ಕಾಗಿ 21 ಲಕ್ಷ ರೂ.ಗಳನ್ನು ಗುಜರಾತ್‌ನಲ್ಲಿ ಸಿಎಂ ಆಗಿದ್ದಾಗ ನೀಡಿದ್ದರು.  ಸಿಎಂ ಆಗಿದ್ದಾಗ, ಲಭ್ಯವಾದ ಉಡುಗೊರೆಗಳನ್ನು ಹರಾಜಿಗೆ ಹಾಕಿದ್ದರಿಂದ ಬಂದ 89 ಕೋಟಿ ರೂ. ಗಳನ್ನು ಅವರು ಬಾಲಕಿಯರ ಕಲ್ಯಾಣ ನಿಧಿಗೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next