Advertisement

ನಗರಸಭೆಯಿಂದ 1.75 ಕೋಟಿ ರೂ.ಉಳಿತಾಯ ಬಜೆಟ್‌

07:29 AM Feb 23, 2019 | Team Udayavani |

ದೊಡ್ಡಬಳ್ಳಾಪುರ: ನಗರಸಭೆಯಲ್ಲಿ ನಡೆದ ಸರ್ವ ಸದಸ್ಯ ಸಭೆಯಲ್ಲಿ ಅಧ್ಯಕ್ಷ ಟಿ.ಎನ್‌.ಪ್ರಭುದೇವ್‌ 2019-20ನೇ ಸಾಲಿಗೆ 1.75 ಕೋಟಿ ರೂ. ಉಳಿತಾಯ ಬಜೆಟ್‌ ಮಂಡಿಸಿದರು. ಬಜೆಜ್‌ ಗಾತ್ರ 58.16 ಕೋಟಿ ರೂ. ಇದ್ದು, ಇದರಲ್ಲಿ ಒಟ್ಟು ವೆಚ್ಚ 56.41 ಕೋಟಿ ರೂ. ಆಗಲಿದೆ. ಉಳಿತಾಯ 1.75 ಕೋಟಿ ರೂ. ಎಂದು ತಿಳಿಸಿದರು. ಹಸಿರು ಹಾಗೂ ನಿರ್ಮಲ ನಗರ ನಿರ್ಮಾಣಕ್ಕಾಗಿ 48.58 ಲಕ್ಷ ರೂ. ಅಂದಾಜಿಸಲಾಗಿದೆ.

Advertisement

ಉದ್ಯಾನವನಗಳ ನಿರ್ವಹಣೆಗಾಗಿ 20 ಲಕ್ಷ ರೂ., ಒಳಚರಂಡಿ ಶುದ್ಧೀಕರಣ ಫಟಕದ ಸುತ್ತಲು ಸಸಿ ಮತ್ತು ಮರಗಳನ್ನು ಬೆಳೆಸಲು 5.54 ಲಕ್ಷ ರೂ., ನಗರದ ಪ್ರಮುಖ ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಡುವ ಮತ್ತು ಟ್ರೀ ಗಾ ರ್ಡ್‌  ಅಳವಡಿಸಲು ಕೊಂಗಾಡಿಯಪ್ಪ ಹಸಿರು ವೃಕ್ಷ ಕಾರ್ಯಕ್ರಮಕ್ಕಾಗಿ 20 ಲಕ್ಷ ರೂ. ಮೀಸಲಿರಿಸಲಾಗಿದೆ ಎಂದರು.

ನೈರ್ಮಲ್ಯಕ್ಕಾಗಿ 2.65 ಕೋಟಿ ರೂ.: ನಗರ ನೈರ್ಮಲ್ಯ ಹಾಗೂ ಸ್ವತ್ಛತೆ ಕಾರ್ಯಗಳಿಗೆ ಮತ್ತು ಘನ ತ್ಯಾಜ್ಯ ವಸ್ತು ನಿರ್ವಹಣೆ ಕಾಮಗಾರಿಗಳಿಗಾಗಿ 2.65 ಕೋಟಿ ರೂ.ಗಳನ್ನು ಸ್ವತ್ಛತೆಗಾಗಿಯೇ ಮೀಸಲಿಡಲಾಗಿದೆ. ಸಾರ್ವಜನಿಕರಲ್ಲಿ ಆರೋಗ್ಯ, ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಮತ್ತು ಸ್ವತ್ಛತೆ, ನೀರಿನ ಸದ್ಬಳಕೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು 10 ಲಕ್ಷ ರೂ. ಮೀಸಲಿಡಲಾಗಿದೆ ಎಂದು ತಿಳಿಸಿದರು.

ಪ್ರತಿಮೆ ನಿರ್ಮಾಣಕ್ಕೆ 20 ಲಕ್ಷ ರೂ.: ನಗರದ ವಿವಿಧ ಭಾಗದ ಪ್ರಮುಖ ವೃತ್ತಗಳಲ್ಲಿ ಕುವೆಂಪು, ಡಾ.ಶಿವಕುಮಾರ ಸ್ವಾಮೀಜಿ, ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ನಿರ್ಮಾಣಕ್ಕಾಗಿ 20 ಲಕ್ಷ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದರು.

ಅಭಿವೃದ್ಧಿ ಕಾಮಗಾರಿಗಳು: 2019-20ನೇ ಸಾಲಿನಲ್ಲಿ ವಿವಿಧ ರಸ್ತೆ, ಚರಂಡಿಗಳ ನಿರ್ಮಾಣಕ್ಕಾಗಿ 749.36 ಲಕ್ಷ,  ಬೀದಿ ದೀಪ ಅಳವಡಿಕೆಗಾಗಿ 30ಲಕ್ಷ ರೂ., ಮಳೆನೀರು ಚರಂಡಿ, ಕವರಿಂಗ್‌ ಸ್ಲಾಬ್‌ ನಿರ್ಮಾಣ 1.15 ಕೋಟಿ ರೂ., ಕೆ.ಆರ್‌.ಮಾರುಕಟ್ಟೆ ಮಳಿಗೆಗಳ ನಿರ್ಮಾಣಕ್ಕಾಗಿ ಈ ಸಾಲಿನಲ್ಲಿ 2.50 ಕೋಟಿ ರೂ. ವಿನಿಯೋಗಿಸಲು ನಿರ್ಧರಿಸಲಾಗಿದೆ. ಕೊಂಗಾಡಿಯಪ್ಪ ಬಸ್‌ ನಿಲ್ದಾಣ ಉನ್ನತೀಕರಣಕ್ಕಾಗಿ 50 ಲಕ್ಷ ರೂ., ಆಧುನಿಕ ಕಸಾಯಿಖಾನೆ ನಿರ್ಮಾಣಕ್ಕಾಗಿ 20 ಲಕ್ಷ ರೂ.,ನಗರದ ಪ್ರಮುಖ ರಸ್ತೆಗಳ ಒತ್ತುವರಿ ತೆರವು, ದಾವಾ ಮತ್ತು ಇತರೆ ಪೂರಕ ವೆಚ್ಚಗಳಿಗಾಗಿ 25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.

Advertisement

ದೊಡ್ಡಬಳ್ಳಾಪುರ ಹಬ್ಬ: ರಾಷ್ಟ್ರೀಯ ಹಬ್ಬ, ಸ್ಥಳೀಯ ಹಬ್ಬಗಳ ಆಚರಣೆಗಾಗಿ 8.30 ಲಕ್ಷ ರೂ., ದೊಡ್ಡಬಳ್ಳಾಪುರ ಹಬ್ಬ ಆಚರಣೆಗಾಗಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕರಗ ಮಹೋತ್ಸವಕ್ಕಾಗಿ 3 ಲಕ್ಷ ರೂ.ಗಳನ್ನು ಈ ಬಾರಿ ವಿಶೇಷವಾಗಿ ಮೀಸಲಿರಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡದ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ 90.25 ಲಕ್ಷ ರೂ.,ಅಂಗವಿಕಲರ  ಕಲ್ಯಾಣಕ್ಕಾಗಿ 18.70 ಲಕ್ಷ ರೂ., ಪೌರ ಕಾರ್ಮಿಕರ ಬಿಸಿಯೂಟಕ್ಕಾಗಿ ಶೇ.24.10ರ ಯೋಜನೆಯಡಿ 10 ಲಕ್ಷ ರೂ.ಮೀಸಲಿರಿಸಲಾಗಿದೆ ಎಂದರು.

ಪೌರಕಾರ್ಮಿಕರಿಗೆ ಸೂರು: ವಸತಿ ರಹಿತ ಪೌರಕಾರ್ಮಿಕರಿಗೆ ಗೃಹ ನಿರ್ಮಾಣಕ್ಕಾಗಿ ಪೌರ ಕಾರ್ಮಿಕರಿಗೆ ಗುಂಪು ಮನೆ ನಿರ್ಮಾಣಕ್ಕಾಗಿ ಪ್ರಸಕ್ತ ಸಾಲಿನಲ್ಲಿ 1.50 ಕೋಟಿ ರೂ.ಗಳನ್ನು ವಿನಿಯೋಗಿಸಲಾಗುವುದು. ಸರ್ವರಿಗೂ ಸೂರು ಯೋಜನೆಯಡಿ ವಸತಿ ರಹಿತ ಬಡಜನರಿಗಾಗಿ ಗುಂಪು ಮನೆಗಳ ನಿರ್ಮಾಣಕ್ಕಾಗಿ 1 ಕೋಟಿ ರೂ., ಶೇ.7.25ರ ಯೋಜನೆಯಡಿ ಬೀದಿ ಬದಿ ಸಣ್ಣ ವ್ಯಾಪಾರಿಗಳಿಗೆ 25 ಕೈಗಾಡಿಗಳನ್ನು ವಿತರಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ 3 ಲಕ್ಷ ರೂ. ಕಾಯ್ದಿರಿಸಲಾಗಿದೆ. ವಿದ್ಯುತ್‌ ಚಿತಾಗಾರ ನಿರ್ಮಾಣಕ್ಕಾಗಿ 2 ಕೋಟಿ ರೂ. ಮೀಸಲಿರಿಸಲಾಗಿದೆ.

ಇದಕ್ಕಾಗಿ ನಗರದ ಹೊರವಲಯದ ತಿಮ್ಮಸಂದ್ರ ಸಮೀಪ 3.15 ಎಕರೆ ಭೂಮಿಯನ್ನು ಸರ್ಕಾರ ನಗರಸಭೆಗೆ ಮಂಜೂರು ಮಾಡಿದೆ. ನೇಕಾರ ಭವನ ನಿರ್ಮಾಣಕ್ಕಾಗಿ ನಗರಸಭೆಯಿಂದ 15 ಲಕ್ಷ ರೂ.ಮೀಸಲಿರಿಸಲಾಗಿದೆ. ನಗರದಲ್ಲಿ ದಿನ ಪತ್ರಿಕೆ ಹಂಚುವ ಬಡ ಯುವಜನರಿಗೆ ಚಿತ ಬೈಸಿಕಲ್‌ ವಿತರಣೆಗಾಗಿ 1.50 ಲಕ್ಷ ರೂ., ಲಯನ್ಸ್‌ ಕ್ಲಬ್‌ಗ ಡಯಾಲಿಸಿಸ್‌ ಯಂತ್ರ ಖರೀದಿಸಲು 5 ಲಕ್ಷ ರೂ. ಮೀಸಲಿರಿಸಲಾಗಿದೆ ಎಂದರು.  

ಬಜೆಟ್‌ ಸಭೆಯಲ್ಲಿ ನಗರಸಭೆ ಪಾಧ್ಯಕ್ಷೆ ಜಯಲಕ್ಷಿ ನಟರಾಜ, ಪೌರಾಯುಕ್ತ ಆರ್‌.ಮಂಜುನಾಥ್‌, ಸ್ಥಾಯಿ ಸಮಿತಿ ಅಧ್ಯಕ್ಷ ಎನ್‌.ಕೆ.ರಮೇಶ್‌, ಕಾರ್ಯಪಾಲಕ ಇಂಜಿನಿಯರ್‌ ಶೇಖ್‌ ಫಿರೋಜ್‌ ಇತರರಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next