Advertisement

ಶಾಸಕ ಬಸನಗೌಡಗೆ 150 ಕೋಟಿ ಆಫ‌ರ್‌: ಉಗ್ರಪ್ಪ

06:10 AM May 19, 2018 | |

ಬೆಂಗಳೂರು: ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ಬಿಜೆಪಿ ಪರ ಮತ ಚಲಾಯಿಸುವಂತೆ ಕಾಂಗ್ರೆಸ್‌ನ ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್‌ಗೆ ಬಿಜೆಪಿ ಮುಖಂಡ, ಮಾಜಿ ಸಚಿವ ಜೆ. ಜನಾರ್ದನ ರೆಡ್ಡಿ 150 ಕೋಟಿ ರೂ.ಗಳ ಆಮಿಷ ಒಡ್ಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ವಿ. ಎಸ್‌. ಉಗ್ರಪ್ಪ ಆರೋಪಿಸಿದ್ದು, ಇಬ್ಬರೂ ಮಾತನಾಡಿರುವ ಆಡಿಯೋ ಬಿಡುಗಡೆ ಮಾಡಿದ್ದಾರೆ.

Advertisement

ಪತ್ರಿಕಾಗೋಷ್ಠಿ ನಡೆಸಿದ ಅವರು,ಬಿಜೆಪಿ ನಾಯಕರು ಕಾಂಗ್ರೆಸ್‌ ಶಾಸಕರಿಗೆ ಹಣ ಹಾಗೂ ಅಧಿಕಾರದ ಆಮಿಷ
ಒಡ್ಡುತ್ತಿದ್ದಾರೆ. ಇದುವರೆಗೂ 25 ಕೋಟಿ ರೂ. ಆಮಿಷ ಒಡ್ಡುತ್ತಿದ್ದರು.ಈಗ 150 ಕೋಟಿ ರೂ.ಆಮಿಷ ಒಡ್ಡಿ
ದ್ದಾರೆ. ಸ್ವತಃ ಜನಾರ್ದನ ರೆಡ್ಡಿ ಅವರು ಬಸನಗೌಡ ದದ್ದರ್‌ಗೆ ದೂರವಾಣಿ ಕರೆ ಮಾಡಿ ಆಮಿಷ ಒಡ್ಡಿದ್ದಾರೆ ಎಂದರು.

ಅಮಿತ್‌ ಶಾ ಅವರು ಕಾಂಗ್ರೆಸ್‌ ಹಾಗೂ ಬಿಜೆಪಿ ಶಾಸಕರಿಗೆ ಆಮಿಷವೊಡ್ಡಿರುವ ಆಡಿ ಯೋವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಆಡಿಯೋದಲ್ಲಿರುವುದು: ” ಹಲೋ ಬಸನಗೌಡ, ಫ್ರಿಯಾಗಿದ್ದಿಯಮ್ಮಾ… ಏನಿಲ್ಲಮ್ಮಾ ನಿನ್ನದು ಹಳೆಯದೇ
ನಿದ್ದರೂ ಮರೆತು ಬಿಡು. ನಾನು ನಿನಗೆ ಅರ್ಧ ರಾತ್ರಿಯಲ್ಲಿ ಹೇಳುತ್ತಿದ್ದೇನೆ.

ನನಗೆ ಒಳ್ಳೆಯ ಕಾಲ ಶುರುವಾಗಿದೆ. ನಿನ್ನ ಹತ್ತಿರ ನೇರವಾಗಿ ದೊಡ್ಡವರು ರಾಷ್ಟ್ರೀಯ ಅಧ್ಯಕ್ಷರು ಮಾತನಾಡಲಿ
ದ್ದಾರೆ. ಒನ್‌ ಟು ಒನ್‌ ಮಾತನಾಡಿಯೇ ಮುಂದಿನ ಹೆಜ್ಜೆ ಇಡೋಣ.

Advertisement

ಶಿವನಗೌಡ ನಾಯಕ್‌ ನನ್ನ ಮಾತು ಕೇಳಿ ಮಂತ್ರಿಯಾಗಿ ಈಗ ಉದಾಟಛಿರ ಆಗಿದ್ದಾನೆ. ಸಾಯೋವರೆಗೂ ಎಂಎಲ್‌ಎ ಆಗೋವಷ್ಟು ಶಕ್ತಿವಂತ ನಾಗಿದ್ದಾನೆ. ನನ್ನಿಂದಾನೇ ಆಗಿದ್ದು, ರಾಜುಗೌಡಾನೂ ನನ್ನಿಂದಲೇ ಆಗಿದ್ದು.

ಇವತ್ತು ಏನಂದರೆ, ಶಿವನಗೌಡ ಗೆದ್ದರೂ ಪ್ರಯೋಜನ ಇಲ್ಲ. ನೀನು ಇವತ್ತು ಮಂತ್ರಿ ಆಗುತ್ತಿ. ಏನಂದರೆ, ದೊಡ್ಡವರ ಜೊತೆ ಒನ್‌ ಟು ಒನ್‌ ನಾನೇ ಮಾತನಾಡಿಸುತ್ತೇನೆ. ದೇಶದಲ್ಲಿ ಅವರು ಏನು ಆಡಳಿತ ಮಾಡುತ್ತಿದ್ದಾರೆ. ಅವರು ಮಾತು ಉಳಿಸಿಕೊಳ್ಳುವಂ ತವರಿದ್ದಾರೆ.

ನೀನು ಈಗ ಏನ್‌ ಆಸ್ತಿ ಮಾಡಿಕೊಂಡಿದ್ದೀಯ ಅದರ ನೂರರಷ್ಟು ಆಸ್ತಿ ಮಾಡಿಕೊಳ್ಳುತ್ತೀಯ ಬಸನಗೌಡ’ ಎಂದು
ಹೇಳಿದ್ದಾರೆ ಎಂದು ಹೇಳಲಾಗಿದೆ.

“ಇಲ್ಲ ಸರ್‌, ಲಾಸ್ಟ್‌ ಪರಿಸ್ಥಿತಿಯೊಳಗ ನನಗ ಕರಕೊಂಡು ಬಂದು ಟಿಕೆಟ್‌ ಕೊಡಿಸಿ ಅವರ ಇಲೆಕ್ಷನ್‌ ಮಾಡ್ಯಾರು.
ಅವರಿಗೆ ದ್ರೋಹ ಮಾಡೋದು ಅರ್ಥ ಇಲ್ಲಾ. ನಿಮ್ಮ ಬಗ್ಗೆ ನನಗೆ ಗೌರವ ಇದೆ’ಎಂದು ಬಸನಗೌಡ ಹೇಳಿರುವುದು
ಆಡಿಯೋದಲ್ಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next