Advertisement

ಎಳ್ಳಾರೆ: 12 ಲಕ್ಷ ರೂ. ವೆಚ್ಚದ ಓವರ್‌ ಹೆಡ್‌ ಟ್ಯಾಂಕ್‌ ಉದ್ಘಾಟನೆ

12:20 AM Jun 23, 2019 | Team Udayavani |

ಅಜೆಕಾರು: ಕಡ್ತಲ ಗ್ರಾ.ಪಂ. ವ್ಯಾಪ್ತಿಯ ರಸ್ತೆ, ಸೇತುವೆ, ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ಹೆಚ್ಚಿನ ಅನುದಾನ ಒದಗಿಸಲಾಗಿದ್ದು ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಅನುದಾನ ನೀಡುವ ಭರವಸೆಯನ್ನು ಶಾಸಕ ಸುನಿಲ್ ಕುಮಾರ್‌ ನೀಡಿದರು.

Advertisement

ಎಳ್ಳಾರೆಯ ಹೆಬ್ಟಾರ್‌ ಜಡ್ಡು ಎಂಬಲ್ಲಿ ಸುಮಾರು 12 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾದ ಓವರ್‌ ಹೆಡ್‌ ಟ್ಯಾಂಕ್‌ನ್ನು ಉದ್ಘಾಟಿಸಿ ಅನಂತರ ಎಳ್ಳಾರೆ ಮುಳ್ಕಾಡು ಸ.ಕಿ.ಪ್ರಾ. ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಡ್ತಲ ಗ್ರಾ.ಪಂ. ಅಧ್ಯಕ್ಷರಾದ ಅರುಣ್‌ ಕುಮಾರ್‌ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕಂದಾಯ ಉಪಕಾರ್ಯದರ್ಶಿ ಸದಾಶಿವ ಪ್ರಭು, ತಾ.ಪಂ. ಸದಸ್ಯರಾದ ಸುಲತಾ ನಾಯ್ಕ, ಎಪಿಎಂಸಿ ನಿರ್ದೇಶಕ ದಿನೇಶ್‌ ಪೈ, ಕ್ಯಾಂಪ್ಕೋ ನಿರ್ದೇಶಕ ದಯಾನಂದ ಹೆಗ್ಡೆ, ತಾ.ಪಂ. ಸದಸ್ಯ ರಮೇಶ್‌ ಕುಮಾರ್‌, ಪಿಡಿಒ ಫ‌ರ್ಜಾನಾ ಎಂ., ವರಂಗ ಗ್ರಾ.ಪಂ. ಅಧ್ಯಕ್ಷ ಸುರೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಸಮ್ಮಾನ

ಸ್ಥಳ ದಾನ ನೀಡಿದ ಅಶೋಕ್‌ ಆಚಾರ್ಯ, ಗುತ್ತಿಗೆ ದಾರ ಗಣೇಶ್‌ ಕುಲಾಲ್, ಹಿರಿಯರಾದ ವೆಂಕಟರಾಯ ನಾಯಕ್‌ ಹಾಗೂ ಜಿಲ್ಲಾ ಪಂಚಾಯತ್‌ ಸದಸ್ಯೆ ಜ್ಯೋತಿಹರೀಶ್‌ ಅವರನ್ನು ಸಮ್ಮಾನಿಸಲಾಯಿತು.

Advertisement

ಗ್ರಾಮ ಪಂಚಾಯತ್‌ ಸದಸ್ಯರಾದ ಸತೀಶ್‌ ಪೂಜಾರಿ ಪ್ರಸ್ತಾವನೆಗೈದರು. ಶಿಕ್ಷಕ ಜನಾರ್ದನ ಬೆಳಿರಾಯ ಸ್ವಾಗತಿಸಿದರು. ರೇವತಿ ವಂದಿಸಿದರು. ವಿನಯ್‌ ಭಟ್ ಕಾರ್ಯಕ್ರಮ ನಿರೂಪಿಸಿದರು. ಗ್ರಾ.ಪಂ. ಸದಸ್ಯರಾದ ಸುಕೇಶ್‌ ಹೆಗ್ಡೆ, ಗೌರವ ಶಿಕ್ಷಕಿ ಸಂಧ್ಯಾ, ರಶ್ಮಿ, ಸುಪ್ರಿಯಾ ಸಹಕರಿಸಿದರು.

ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್‌ ಮಾತನಾಡಿ, ಎಳ್ಳಾರೆ ಭಾಗದ ಜನತೆಯ ಬಹುದಿನದ ಬೇಡಿಕೆಯಾದ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಜಿ.ಪಂ. ಅನುದಾನದಿಂದ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next