Advertisement

ಕಾನ್ಪುರ 100 ಕೋಟಿ ರೂ ನೋಟುಗಳಿಗೂ ಬೆಂಗಳೂರು ಲಿಂಕ್‌?

10:18 AM Jan 20, 2018 | Team Udayavani |

ಕಾನ್ಪುರ/ಹೊಸದಿಲ್ಲಿ: ಕಾನ್ಪುರ ದಲ್ಲಿ ವಶಪಡಿಸಲಾದ ಅಪಮೌಲ್ಯಗೊಂಡ 100 ಕೋಟಿ ರೂ. ನೋಟುಗಳಿಗೂ ಕರ್ನಾಟಕಕ್ಕೂ ಸಂಬಂಧ ಇದೆಯಾ?ಹೌದು, ಎನ್ನುತ್ತಿದೆ ಈ ವರದಿ. 

Advertisement

ಬಲೆಗೆ ಬೀಳುವುದಕ್ಕಿಂತ ಮೊದಲು ಇಡೀ ಜಾಲ ಕರ್ನಾಟಕ ಸಹಿತ 5 ರಾಜ್ಯಗಳಲ್ಲಿ ಕಾರ್ಯಾ ಚರಣೆ ನಡೆಸುತ್ತಿತ್ತು. ಬೆಂಗಳೂರಿನ ಹರಿಕೃಷ್ಣ ಎಂಬಾತ ಅಪಮೌಲ್ಯಗೊಂಡ ನೋಟುಗಳ ಒಟ್ಟು 40%ರಷ್ಟನ್ನು ಬದಲಿಸಿ ಕೊಡುತ್ತೇನೆ ಎಂದು  ವಾಗ್ಧಾನ ಮಾಡಿದ್ದ ಎನ್ನಲಾಗಿದೆ. ಬಂಧನಕ್ಕೆ ಒಳಗಾಗಿರುವ 16  ಆರೋಪಿಗಳ ಪೈಕಿ ಒಬ್ಬ ಬಾಯಿಬಿಟ್ಟಿರುವುದಾಗಿ “ದ ಟೈಮ್ಸ್‌ ಆಫ್ ಇಂಡಿಯಾ’ ವರದಿ ಮಾಡಿದೆ.

ಬೆಂಗಳೂರು ಸಂಪರ್ಕದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಕಾನ್ಪುರ ಪೂರ್ವ ವಿಭಾಗದ ಎಸ್ಪಿ ಅನುಗಾರ್‌ ಆರ್ಯ ತಿಳಿಸಿದ್ದಾರೆ. ಜ. 30ರ ವರೆಗೆ ಅವರು ನ್ಯಾಯಾಂಗ ವಶದಲ್ಲಿರಲಿದ್ದು, ಬಳಿಕ ಬಂಧಿತರನ್ನು ಪೊಲೀಸ್‌ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದಿದ್ದಾರೆ.

“ಸಂಜೀವ್‌ ಅಗರ್ವಾಲ್‌, ಮನೀಶ್‌ ಅಗರ್ವಾಲ್‌ ಕಮಿಷನ್‌ ಏಜೆಂಟ್‌ ಆಗಿ ದ್ದರು. ಹೈದರಾಬಾದ್‌ನ ಕೋಟೇಶ್ವರ ರಾವ್‌ ಬೆಂಗಳೂರಿನ ಹರಿಕೃಷ್ಣಗೆ ಕೆಲಸ ಮಾಡುತ್ತಿದ್ದ’ ಎಂದು ಎಸ್ಪಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next