Advertisement

ನಾಗೇಶ್ವರ ರಾವ್‌ಗೆ “ಮೂಲೆ’ಶಿಕ್ಷೆ

12:30 AM Feb 13, 2019 | Team Udayavani |

ಹೊಸದಿಲ್ಲಿ: “ನ್ಯಾಯಾಂಗ ನಿಂದನೆ’ಯ ಬಲೆಯಲ್ಲಿ ಸಿಲುಕಿದ್ದ ಸಿಬಿಐಯ ಮಾಜಿ ಹಂಗಾಮಿ ನಿರ್ದೇಶಕ ನಾಗೇಶ್ವರ ರಾವ್‌ ಮತ್ತು ಸಿಬಿಐ ಕಾನೂನು ಸಲಹೆಗಾರ ಎಸ್‌.ಬಿ. ಭಸುರಾಮ್‌ ಅವರಿಗೆ ಸುಪ್ರೀಂ ಕೋರ್ಟ್‌ ತಲಾ ಒಂದು ಲಕ್ಷ ರೂ. ದಂಡ ವಿಧಿಸಿದೆ. ಜತೆಗೆ ಮಂಗಳ ವಾರದ ನ್ಯಾಯಾಲಯದ ಕಲಾಪ ಮುಗಿ ಯುವವರೆಗೂ ವಿಚಾರಣ ಕೊಠಡಿಯ ಮೂಲೆಯಲ್ಲಿ ಕುಳಿತುಕೊಳ್ಳುವ ಶಿಕ್ಷೆ ನೀಡಿ, ಬಳಿಕ ವಾಪಸ್‌ ಕಳುಹಿಸಿದೆ.

Advertisement

ರಾವ್‌ ಅವರು ಇತ್ತೀಚೆಗೆ ಸಿಬಿಐ ಹಂಗಾಮಿ ಮುಖ್ಯಸ್ಥರಾಗಿದ್ದಾಗ ಬಿಹಾರದ ಬಾಲಿಕಾಶ್ರಮದ ಲೈಂಗಿಕ ಹಗರಣದ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿ ಶರ್ಮಾ ಅವರನ್ನು ಸುಪ್ರೀಂ ಆದೇಶ ಗಣನೆಗೆ ತೆಗೆದುಕೊಳ್ಳದೆ ವರ್ಗ ಮಾಡಿ ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದರು.

ಸೋಮವಾರ ನ್ಯಾಯಾಲಯಕ್ಕೆ ಅಫಿ ದವಿತ್‌ ಸಲ್ಲಿಸಿದ್ದ ರಾವ್‌, “ಶರ್ಮಾರ ವರ್ಗಾವಣೆ ಅಚಾ ತುರ್ಯ ದಿಂದ ಆಗಿದ್ದಷ್ಟೇ, ಉದ್ದೇಶ ಪೂರ್ವಕವಲ್ಲ’ ಎಂಬ ಸ್ಪಷ್ಟನೆ ನೀಡಿ, ನ್ಯಾಯಾಲಯದ ಕ್ಷಮೆ ಕೋರಿದ್ದರು. ಮಂಗಳ ವಾರದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾ| ರಂಜನ್‌ ಗೊಗೊಯ್‌ ಅವರುಳ್ಳ ನ್ಯಾಯ ಪೀಠವು ಈ ಮನವಿಯನ್ನು ಮಾನ್ಯ ಮಾಡಲಿಲ್ಲ. ಈ ಸಂದರ್ಭದಲ್ಲಿ ರಾವ್‌-ಭಸು ರಾಮ್‌ ಅವರನ್ನು ಬಚಾವು ಮಾಡಲು ಅಟಾರ್ನಿ ಜನರಲ್‌ ವೇಣು ಗೋಪಾಲ್‌ ನಡೆಸಿದ ಪ್ರಯತ್ನ ಗಳೆಲ್ಲವೂ ವಿಫ‌ಲವಾದವು. 

ಕೊನೆಗೆ ತಲಾ 1 ಲಕ್ಷ ರೂ.ಗಳ ದಂಡ ಮತ್ತು ಕೋರ್ಟ್‌ ಕೊಠಡಿಯ ಮೂಲೆಯಲ್ಲಿ ಕುಳಿತುಕೊಳ್ಳುವ ಶಿಕ್ಷೆ ವಿಧಿಸಲಾಯಿತು. ಸಂಜೆ ಕಲಾಪ ಮುಗಿದ ಬಳಿಕ ಇಬ್ಬರೂ ತೆರಳಿದರು. 

Advertisement

Udayavani is now on Telegram. Click here to join our channel and stay updated with the latest news.

Next