Advertisement
ಧಾರವಾಡದ ಹಾರೋ ಬೆಳವಾಡಿ ಗ್ರಾಮದ ಮೂರು ರೈತರಿಗೆ ಧಾರವಾಡದ ಕಂದಾಯ ಇಲಾಖೆಯಿಂದ 1 ರೂಪಾಯಿ ಪರಿಹಾರ ಜಮೆ ಮಾಡಿದೆ. ಗ್ರಾಮದ ಸಂಗನಗೌಡ, ಮಾನಪ್ಪ ಹಾಗೂ ರುದ್ರಪ್ಪ ಎಂಬ ರೈತರ ಬ್ಯಾಂಕ್ ಖಾತೆಗೆ ಒಂದು ರೂಪಾಯಿ ಬೆಳೆ ಹಾನಿ ಪಪರಿಹಾರ ಜಮಾ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವ, ರೈತರ ಹೆಸರಿನಲ್ಲಿ ರಾಜಕಾರಣ ನಡೆಸುವ ಜನಪ್ರತಿನಿಧಿಗಳು, ಸರ್ಕಾರಗಳು ರೈತರನ್ನು ಅವಮಾನ ಮಾಡುತ್ತಿರುವುದಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಬೇಕಿಲ್ಲ. ಲಕ್ಷಾಂತರ ರೂಪಾಯಿ ಬೆಳೆ ನಷ್ಟ ಹೊಂದಿದ ರೈತನ ಖಾತೆಗೆ ಕೇವಲ ಒಂದು ರೂಪಾಯಿ ಜಮಾ ಮಾಡುವುದು ಅವಮಾನ ಮಾಡಿದಂತೆಯೇ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಖಾಸಗಿ ಚಾನೆಲ್ ವೊಂದರ ಜೊತೆ ಮಾತನಾಡುತ್ತಿ ತಿಳಿಸಿದ್ದಾರೆ.
Related Articles
ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇದೆಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಲು ಒಂದು ರೂಪಾಯಿಯನ್ನು ಹಾಕಿ ಪರೀಕ್ಷೆ ಮಾಡಿರುವುದಾಗಿ ಧಾರವಾಡ ಉಪ ವಿಭಾಗಾಧಿಕಾರಿ ಮಹೇಶ್ ಕರ್ಜಗಿ ಸಮಜಾಯಿಷಿ ನೀಡಿದ್ದಾರೆ.
Advertisement