Advertisement

ಬೆಂಗಳೂರಿನಲ್ಲಿ ನಡೆಯಲಿದೆ ‘ಆರ್‌ಆರ್‌ಆರ್‌’ಪ್ರೀ ರಿಲೀಸ್‌ ಇವೆಂಟ್‌

04:49 PM Nov 27, 2021 | Team Udayavani |

ರಾಜಮೌಳಿ ನಿರ್ದೇಶನದ “ಆರ್‌ಆರ್‌ಆರ್‌’ ಸಿನಿಮಾದ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್‌, ಹಾಡು, ಫ‌ಸ್ಟ್‌ಲುಕ್ ಚಿತ್ರದ ಕುತೂಹಲ ಹೆಚ್ಚಿಸಿದೆ.

Advertisement

ಈಗ ಚಿತ್ರದ ಮತ್ತೂಂದು ಹಾಡು ಬಿಡುಗಡೆಯಾಗಿದೆ. ಅದು ಬೆಂಗಳೂರಿನಲ್ಲಿ. ನಿರ್ದೇಶಕ ರಾಜಮೌಳಿ ಚಿತ್ರದ “ಜನನಿ’ ಹಾಡಿನ ಬಿಡುಗಡೆಗಾಗಿ ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನನಗೆ ಸರಿಯಾಗಿ ಕನ್ನಡ ಬರುವುದಿಲ್ಲ. ನನ್ನ ಕನ್ನಡದ ಬಗ್ಗೆ ಕ್ಷಮೆ ಇರಲಿ’ ಎಂದರು.

ಇದನ್ನೂ ಓದಿ:‘ಗೋವಿಂದ ಗೋವಿಂದ’ ಚಿತ್ರವಿಮರ್ಶೆ: ಕಾಮಿಡಿ ಕಿಲಾಡಿಗಳ ಗೋವಿಂದ ಸ್ಮರಣೆ

ಜೊತೆಗೆ ಮುಂದಿನ ತಿಂಗಳು “ಆರ್‌ಆರ್‌ಆರ್‌’ ಚಿತ್ರದ ಪ್ರೀ ರಿಲೀಸ್‌ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಸಲಿದ್ದು, ಅಂದು ಚಿತ್ರದ ಕಲಾವಿದರಾದ ಜೂ.ಎನ್‌ಟಿಆರ್‌, ರಾಮ್‌ ಚರಣ್‌ ತೇಜಾ, ಅಜಯ್‌ ದೇವಗನ್‌, ಅಲಿಯಾ ಭಟ್‌ ಕೂಡಾ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

“ಜನನಿ’ ಹಾಡಿನ ಬಗ್ಗೆ ಮಾತನಾಡಿದ ರಾಜಮೌಳಿ, “ಜನನಿ ಕೇವಲ ಹಾಡಲ್ಲ. ಇದು ನಮ್ಮ  ಸಿನಿಮಾದ ಆ್ಯಂಥಮ್‌. ಈ ಹಾಡಿನಲ್ಲಿ ಒಂದು ಭಾವನೆ ಇದೆ. ಚಿತ್ರದ ಅದ್ಭುತವಾದ ಹಾಡು, ಫೈಟ್‌, ಡ್ಯಾನ್ಸ್‌ ನೋಡಿದ್ದೀರಿ. ಅದರ ಹಿಂದೆಯೂ ಒಂದು ಭಾವನೆ ಇದೆ’ ಎಂದು ಚಿತ್ರದ ಬಗ್ಗೆ ಹೇಳಿದರು ರಾಜಮೌಳಿ. ಚಿತ್ರ ಜನವರಿ 07ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

Advertisement

ಬೆಂಗಳೂರಿಗೆ ಆಗಮಿಸಿದ್ದ ರಾಜಮೌಳಿ “ಆರ್‌ಆರ್‌ಆರ್‌’ ಹಾಡು ಬಿಡುಗಡೆ ಬಳಿಕ ನಟ ಪುನೀತ್‌ರಾಜ್‌ಕುಮಾರ್‌ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಪುನೀತ್‌ ಭೇಟಿಯನ್ನು ನೆನಪಿಸಿಕೊಂಡರು

Advertisement

Udayavani is now on Telegram. Click here to join our channel and stay updated with the latest news.

Next