Advertisement

ರಾಯಲ್‌ ತುಳು ಕೂಟ ಫೌಂಡೇಶನ್‌ ದಶಮಾನೋತ್ಸವ ಸಂಭ್ರಮ

05:11 PM Apr 28, 2019 | Vishnu Das |

ಮುಂಬಯಿ: ರಾಯಲ್‌ ತುಳು ಕೂಟ ಫೌಂಡೇಶನ್‌ ಬಹರೇನ್‌ ಇದರ ದಶಮಾನೋತ್ಸವದ ಅಂಗವಾಗಿ ಬಹರೇನ್‌ ಇಂಡಿಯನ್‌ ಕ್ಲಬ್‌ನಲ್ಲಿ ತುಳು ಪರ್ಬ-2019 ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಮುಖ್ಯ ಅತಿಥಿಗಳಾಗಿ ಸಾಮಾಜಿಕ ಮುಂದಾಳು, ಬಿಜೆಪಿ ರಾಜ್ಯ ಕಾರ್ಯ
ಕಾರಿಣಿ ಸದಸ್ಯ ರವೀಂದ್ರ ಶೆಟ್ಟಿಉಳಿದೊಟ್ಟು ಮಾತನಾಡಿ, ತುಳು ನಮ್ಮ ತಾಯ್ನಾಡಿನ ಭಾಷೆ ಆ ತುಳುನಾಡಿನ ಆಚಾರ, ವಿಚಾರ, ಸಾಹಿತ್ಯ ಮತ್ತು ಸಂಸ್ಕೃತಿಯ ಸೊಗಡನ್ನು ಈ ವಿದೇಶದಲ್ಲೂ ಕೂಡ ಆಚರಿಸಿ,ವಿಜೃಂಭಿಸುತ್ತಿರುವ ಕಾರ್ಯಕ್ರಮ ಸಂಘಟಕರಾಗಿರುವ, ಬಹರೇನ್‌ರಾಯಲ್‌ ತುಳುಕೂಟ ಫೌಂಡೇಶನ್‌ನ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರನ್ನು ಅಭಿನಂದಿಸಿದರು.

ಸಮಾರಂಭದಲ್ಲಿ ಬಹರೇನ್‌ ರಾಯಲ್‌ ತುಳು ಕೂಟ ಫೌಂಡೇಶನ್‌ಅಧ್ಯಕ್ಷ ಕಮಾರ್‌ ನಾಗೇಶ್‌ ಶೆಟ್ಟಿ, ಬಹರೇನ್‌ ಕನ್ನಡ ಸಂಘದ ಅಧ್ಯಕ್ಷ ಪ್ರದೀಪ್‌ ಶೆಟ್ಟಿ, ಮೋಹನ್‌ ದೇವ್‌ ಆಲ್ವಾ, ಬಹರೇನ್‌ ಬಿಲ್ಲವ ಸಂಘದ ಅಧ್ಯಕ್ಷ ಸುರೇಂದ್ರ ಉದ್ಯಾವರ್‌, ಬಂಟ್ಸ್‌ ಬಹರೇನ್‌ ಅಧ್ಯಕ್ಷ ಪ್ರದೀಪ್‌ ಶೆಟ್ಟಿ, ಉದ್ಯಮಿಗಳಾದ ಶಶಿಧರ್‌ ಶೆಟ್ಟಿ ಕೆಂಜೂರ್‌, ಮೋಹನದಾಸ್‌ ರೈ ಎರುಂಬು, ರಾಜೇಶ್‌ ಶೆಟ್ಟಿ, ಮುಸ್ಲಿಂ ಅಸೋಸಿಯೇಶನ್‌ ಅಧ್ಯಕ್ಷ ಅಬ್ದುಲ್‌ ರಜಾಕ್‌, ಬಹರೇನ್‌ ಬಿಲ್ಲವ ಸಂಘದ ಕಾರ್ಯಕಾರಿಣಿ ಸಮಿತಿಯ ಪುರುಷೋತ್ತಮ್‌ ಪೂಜಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು, ಮುಖ್ಯ
ಅತಿಥಿಗಳಾಗಿ ಆಗಮಿಸಿದ ರವೀಂದ್ರಶೆಟ್ಟಿ ಉಳಿದೊಟ್ಟು ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬಹರೇನ್‌ ತುಳು ಕಲಾವಿದರಿಂದ ಎಡ್ಡೆನಿ¤ನ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು. ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next