Advertisement

Darshan ಜೈಲಿನಲ್ಲಿ ರಾಜಾತಿಥ್ಯ ? ಫೋಟೋ ಬೆನ್ನಲ್ಲೇ ಚಾಟ್ ವಿಡಿಯೋ ಬಯಲಿಗೆ!

08:49 PM Aug 25, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy case) ಜೈಲಿನಲ್ಲಿರುವ ನಟ ದರ್ಶನ್‌ (Darshan) ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಜೇವನಕ್ಕೆ ಅವಕಾಶ ನೀಡಲಾಗಿದೆಯೇ? ರಾಜಾತಿಥ್ಯ ನೀಡಲಾಗುತ್ತಿದೆಯೇ? ಈ ಪ್ರಶ್ನೆಗಳು ಹುಟ್ಟಿ ಕೊಳ್ಳಲು ಕಾರಣವಾಗಿದ್ದು ಭಾನುವಾರ (ಆ 25) ಬಿಡುಗಡೆಯಾಗಿರುವ ಒಂದು ಫೋಟೋ ಮತ್ತು ವಿಡಿಯೋ.

Advertisement

ದರ್ಶನ್‌ ಅವರು ಪ್ರಕರಣದ 11ನೇ ಆರೋಪಿ ನಾಗರಾಜ್‌, ರೌಡಿಶೀಟರ್‌ ವಿಲ್ಸನ್‌ ನಾಗರಾಜ್‌ ಹಾಗೂ ಇನ್ನೊಬ್ಬ ವ್ಯಕ್ತಿಯೊಂದಿಗೆ ಜೈಲಿನ ವಿಡಿಯೋ ಕಾನ್ಫೆರೆನ್ ಹಾಲ್‌ನ ಹಿಂಭಾಗದ ಸ್ಥಳದಲ್ಲಿ ಖುರ್ಚಿ ಮೇಲೆ ಕುಳಿತು ಕೈಯಲ್ಲಿ ಸಿಗರೇಟ್ ಹಿಡಿದು, ಮತ್ತೊಂದು ಕೈಯಲ್ಲಿ ಕಾಫಿ ಕಪ್‌ ಹಿಡಿದುಕೊಂಡಿರುವ ಫೋಟೋ ವೈರಲ್ ಆಗಿದೆ.

ಫೋಟೋ ಬೆನ್ನಲ್ಲೇ ಅದೇ ಮುಖಭಾವದಲ್ಲಿ ದರ್ಶನ್ ಆಪ್ತರೊಬ್ಬರೊಂದಿಗೆ ಇನ್ಸ್ಟಾ ಗ್ರಾಂ ವಿಡಿಯೋದಲ್ಲಿ ಮಾತನಾಡಿರುವ ವಿಡಿಯೋ ಕೂಡ ಬಯಲಿಗೆ ಬಂದಿದೆ.

ಇದನ್ನೂ ಓದಿ : Darshan ಫೋಟೋ ವೈರಲ್;ಕಣ್ಣೀರಿಟ್ಟ ರೇಣುಕಾಸ್ವಾಮಿ ತಂದೆ: ಸಿಬಿಐ ತನಿಖೆಗೆ ಒತ್ತಾಯ

Advertisement

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಮತ್ತು ಜೈಲು ಅಧಿಕಾರಿಗಳಿಗೆ ಮತ್ತು ಗೃಹ ಇಲಾಖೆಗೆ ಈ ವಿದ್ಯಮಾನ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈಗಾಗಲೇ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶವೂ ವ್ಯಕ್ತವಾಗುತ್ತಿದೆ.

ಈ ಫೋಟೋ ಮತ್ತು ವಿಡಿಯೋ ಕುರಿತು ತನಿಖೆ ಮಾಡಿ ಸತ್ಯಾ ಸತ್ಯತೆ ತಿಳಿಸಬೇಕಾದ ಅನಿವಾರ್ಯತೆ ಈಗ ಎದುರಾಗಿದೆ. ಪೊಲೀಸ್ ಇಲಾಖೆಗೆ ಅತೀ ದೊಡ್ಡ ಪ್ರಕರಣ ಇನ್ನಷ್ಟು ಸವಾಲಾಗಿ ಪರಿಣಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next