Advertisement

ರೋಶನಿ ಸಿನಿಮಾ ಎಕ್ಸ್‌ಪ್ರೆಸ್‌

06:40 AM Sep 29, 2017 | Harsha Rao |

ರೋಶನಿ ಪ್ರಕಾಶ್‌- ಇತ್ತೀಚೆಗೆ ಕೇಳಿಬಂದ ಹೆಸರು. “ಕವಲು ದಾರಿ’ಗೆ ರೋಶನಿ ಪ್ರಕಾಶ್‌ ನಾಯಕಿಯಂತೆ ಎಂಬ ಸುದ್ದಿ ಸ್ವಲ್ಪ ಜೋರಾಗಿಯೇ ಕೇಳಿಬಂತು. ಹಾಗಂತ ರೋಶನಿ ಪ್ರಕಾಶ್‌ಗೆ ಕನ್ನಡ ಚಿತ್ರರಂಗ ಹೊಸದಲ್ಲ. ಈಗಾಗಲೇ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಅದು “ಅಜರಾಮರ’. ಆದರೆ, ಆ ಸಿನಿಮಾ ಹೆಚ್ಚು ಸುದ್ದಿಯಾಗದ ಕಾರಣ ರೋಶನಿ ಪ್ರಕಾಶ್‌ ಹೆಸರು ಕೂಡಾ ಹೆಚ್ಚೇನು ಸದ್ದಾಗಿರಲಿಲ್ಲ. ಈಗ “ಕವಲು ದಾರಿ’ಗೆ ನಾಯಕಿಯಾಗುವ ಮೂಲಕ ರೋಶನಿಗೆ ಒಂದು ದೊಡ್ಡ ಪ್ರಾಜೆಕ್ಟ್ ಸಿಕ್ಕಿದೆ. 

Advertisement

ರೋಶನಿ ಮೂಲತಃ ಮೈಸೂರಿನ ಹುಡುಗಿ. ಇಂಜಿನಿಯರಿಂಗ್‌ ಓದಿರುವ ರೋಶನಿ ಮಾಡೆಲಿಂಗ್‌ನಲ್ಲೂ ಮಿಂಚಿದ್ದಾರೆ. ಜೊತೆಗೆ ಬ್ಯೂಟಿ ಕಾಂಟೆಸ್ಟ್‌ಗಳಲ್ಲೂ ಭಾಗವಹಿಸಿದ್ದಾರೆ. ರೋಶನಿಗೆ ಸಹಜವಾಗಿಯೇ ಸಿನಿಮಾದಲ್ಲಿ ನಟಿಸುವ ಆಸೆ ಇತ್ತು. ಅದು ಈಗ ಈಡೇರಿದೆ. ಈಗಾಗಲೇ ತೆಲುಗಿನ “ಸಪ್ತಗಿರಿ ಎಕ್ಸ್‌ಪ್ರೆಸ್‌’ ಚಿತ್ರದಲ್ಲೂ ರೋಶನಿ ನಟಿಸಿದ್ದಾರೆ. ಕನ್ನಡದಲ್ಲಿ ನೀನಾಸಂ ಸತೀಶ್‌ ನಾಯಕರಾಗಿರುವ “ಟೈಗರ್‌ ಗಲ್ಲಿ’ ಚಿತ್ರದಲ್ಲೂ ರೋಶನಿ ಪ್ರಕಾಶ್‌ಗೆ ಒಳ್ಳೆಯ ಪಾತ್ರ ಸಿಕ್ಕಿದೆ. 

ಸದ್ಯ ರೋಶನಿ ಪ್ರಕಾಶ್‌ ತುಂಬಾ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ, ಪುನೀತ್‌ ಬ್ಯಾನರ್‌ ಹಾಗೂ “ಕವಲು ದಾರಿ’. “ಕವಲು ದಾರಿ’ ಚಿತ್ರಕ್ಕೆ ಆಡಿಷನ್‌ ನಡೆಯುತ್ತಿದೆ ಎಂಬ ವಿಷಯ ತಿಳಿದು ರೋಶನಿ ಕೂಡಾ ಹೋದರಂತೆ. ಆದರೆ ಅವರ ಅದೃಷ್ಟ ಚೆನ್ನಾಗಿತ್ತು. ಆಯ್ಕೆಯಾಗಿಬಿಟ್ಟರು. “ತುಂಬಾ ಖುಷಿಯಾಗುತ್ತಿದೆ, ಪುನೀತ್‌ ಅವರ ಬ್ಯಾನರ್‌ನಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಇಲ್ಲಿ ನಾನು ಮಧ್ಯಮ ವರ್ಗದ ಹುಡುಗಿಯಾಗಿ ನಟಿಸುತ್ತಿದ್ದೇನೆ’ ಎಂದು ಖುಷಿಯಿಂದ ಹೇಳುತ್ತಾರೆ ರೋಶನಿ. ರೋಶನಿಗೆ ಈ ಚಿತ್ರದ ಮೂಲಕ ಮತ್ತಷ್ಟು ಅವಕಾಶ ಸಿಗುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next