Advertisement

‘ರೋಹಿಂಗ್ಯಾ ಅಕ್ರಮವಾಸ ತಡೆಯಿರಿ’

10:36 AM Oct 23, 2017 | Team Udayavani |

ಮಹಾನಗರ: ಮ್ಯಾನ್ಮಾರ್‌ ಮೂಲದ ರೋಹಿಂಗ್ಯಾ ಮುಸಲ್ಮಾನರು ಜಮ್ಮುವಿನಿಂದ ದಿಲ್ಲಿ, ಬಂಗಾಲ, ಬಿಹಾರ, ತೆಲಂಗಾಣ ಸಹಿತ ಹಲವಾರು ರಾಜ್ಯಗಳಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದು ಜಿಲ್ಲಾ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ಚಂದ್ರ ಮೊಗೇರ ಆರೋಪಿಸಿದರು.

Advertisement

ಹಿಂದುತ್ವವಾದಿ ಸಂಘಟನೆಗಳ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರವಿವಾರ ನಡೆದ ‘ರಾಷ್ಟ್ರೀಯ ಹಿಂದೂ ಆಂದೋಲನ’ದಲ್ಲಿ ಅವರು ಮಾತನಾಡಿದರು.

ರೋಹಿಂಗ್ಯಾ ಮುಸ ಲ್ಮಾನರು ಹಿಂದೂಗಳ ಮೇಲೆ ಅತ್ಯಾಚಾರ ನಡೆಸಿ ನಮಾಜ್‌ ಪಠಿಸುವುದನ್ನು ಕಡ್ಡಾಯ ಮಾಡಿದ್ದರು. ಆದ್ದರಿಂದ ಸಾಮಾನ್ಯ ನಾಗರಿಕರಿಗೂ ರೋಹಿಂಗ್ಯಾ ಮುಸಲ್ಮಾನರ ಮೇಲೆ ರೋಷವಿದ್ದು, ಅವರಿಗೆ ದೇಶದಲ್ಲಿ ಎಲ್ಲಿಯೂ ವಾಸಿಸಲು ಅವಕಾಶ ನೀಡಬಾರದು ಎಂಬುದು ಜನರ ಅಭಿಪ್ರಾಯವಾಗಿದೆ ಎಂದರು.

ಅವರು ಮ್ಯಾನ್ಮಾರಿನಲ್ಲಿ ಹಿಂದೂ ಹಾಗೂ ಬೌದ್ಧರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ ಹಾಗೂ ಭಯೋತ್ಪಾದಕ ಸಂಘಟನೆಯಾದ ‘ಅಲ್‌ ಕಾಯಿದಾ’ದೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆಯೂ ಆರೋಪವಿದೆ. ಭಾರತಕ್ಕೆ ಅಕ್ರಮ ಪ್ರವೇಶ ಮಾಡಿರುವ ಅವರನ್ನು ತತ್‌ಕ್ಷಣ ಗಡೀಪಾರು ಮಾಡಬೇಕು ಹಾಗೂ ಮತ್ತೆ ದೇಶದೊಳಗೆ ಪ್ರವೇಶಿಸುವುದನ್ನು ತಡೆಯಬೇಕು ಎಂದರು. ಹಿಂದೂ ಮಹಾಸಭಾದ ಧರ್ಮೇಂದ್ರ, ಪ್ರಭಾಕರ ನಾಯ್ಕ ಮುಂತಾದವರಿದ್ದರು.

ಭಗವಾನ್‌ ವಿರುದ್ಧ ಕ್ರಮಕ್ಕೆ ಆಗ್ರಹ 
ಶ್ರೀರಾಮನಿಗೆ ಸಂಬಂಧಿಸಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಪ್ರೊ| ಕೆ.ಎಸ್‌. ಭಗವಾನ್‌ ಅವರು ಕೋಟ್ಯಂತರ ಹಿಂದೂಗಳನ್ನು ನೋಯಿಸಿದ್ದಾರೆ. ಅವರಿಂದ ಪದೇ ಪದೇ ಇಂತಹ ಹೇಳಿಕೆಗಳು ಬರುತ್ತಲೇ ಇರುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ದೇವತೆಗಳಿಗೆ ಅಗೌರವ ತೋರಿ ಸಾಮಾಜಿಕ ಶಾಂತಿಯನ್ನು ಭಂಗಗೊಳಿಸುವ ಪ್ರಯತ್ನವನ್ನೂ ಮಾಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಲಾಯಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next