Advertisement

ಭಂಡಾರಿ ನಂಟಿನ ಬಗ್ಗೆ ವಾದ್ರಾಗೆ ಪ್ರಶ್ನೆಗಳ ಮಳೆ

12:30 AM Feb 10, 2019 | Team Udayavani |

ಹೊಸದಿಲ್ಲಿ: ಅಕ್ರಮ ಆಸ್ತಿ ಹಾಗೂ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ, ರಾಬರ್ಟ್‌ ವಾದ್ರಾ ಅವರ ವಿಚಾರಣೆ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಶನಿವಾರವೂ ನಡೆಯಿತು. 

Advertisement

ಬುಧವಾರ ಮತ್ತು ಗುರುವಾರ 11 ಗಂಟೆ ವಿಚಾರಣೆ ನಡೆಸಿದ್ದ  ಇ.ಡಿ, ಗುರುವಾರದ ವಿಚಾರಣೆಯನ್ನು ವಾದ್ರಾ ಅವರಿಗೆ ಸೇರಿವೆಯೆನ್ನಲಾದ ಲಂಡನ್‌ನಲ್ಲಿನ 110 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿ ಬಗ್ಗೆ ಕೇಂದ್ರೀಕೃತ ಗೊಳಿಸಿತ್ತು. ಜತೆಗೆ, ಬಂದೂಕು ಮಾರಾಟಗಾರ ಸಂಜಯ್‌ ಭಂಡಾರಿ, ಅವರ ಸಂಬಂಧಿ ಸುಮಿತ್‌ ಚಂದಾ ಹಾಗೂ ಇತರ ಇಬ್ಬರೊಂದಿಗೆ ವಾದ್ರಾ ಹೊಂದಿರುವ ನಂಟಿನ ಬಗ್ಗೆ ವಿಚಾರಣೆ ನಡೆಸಲಾಯಿತು. ವರದಿ ಪ್ರಕಾರ, ಲಂಡನ್‌ನ ಬ್ರಯಾನ್‌ಸ್ಟನ್‌ ಸ್ಕ್ವೇರ್‌ನಲ್ಲಿರುವ ವಾದ್ರಾ ಗೆ ಸೇರಿದ 17 ಕೋಟಿ ರೂ. ಮೌಲ್ಯದ ಬಂಗಲೆಯ ನವೀಕರಣ ಹಿನ್ನೆಲೆಯಲ್ಲಿ, ಒಳಾಂಗಣ ವಿನ್ಯಾಸಗಾರ ಸುಮಿತ್‌ ಚಂದಾ, ವಾದ್ರಾ ನಡುವೆ ವಿನಿಮಯಗೊಂಡಿರುವ ಕೆಲ ಇ-ಮೇಲ್‌ಗ‌ಳ ಬಗ್ಗೆ ವಾದ್ರಾ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಒಂದು ಇ-ಮೇಲ್‌ನಲ್ಲಿ ಸುಮಿತ್‌ ಅವರು, ವಾದ್ರಾಗೆ ನವೀಕರಣದ ಬಾಕಿ ಮೊತ್ತ ಪಾವತಿಸಲು ಮನವಿ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ವಾದ್ರಾ, ಪಾವತಿ ವಿಚಾರ ಮನೋಜ್‌ ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಮನೋಜ್‌ ಎಂಬಾತ ವಾದ್ರಾ ಅವರ ಮಾಲೀಕತ್ವದ ಸ್ಕೈಲೈಟ್‌ ಹಾಸ್ಪಿಟಾಲಿಟಿ ಸಂಸ್ಥೆಯ ಉದ್ಯೋಗಿ ಎಂದು ವರದಿಯಲ್ಲಿ ಹೇಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next