Advertisement

ರಾಬರ್ಟ್‌ ಸಕ್ಸಸ್‌: ‘ವಿಜಯ ಯಾತ್ರೆ’ಹೊರಟ ಚಿತ್ರತಂಡ

09:37 AM Mar 24, 2021 | Team Udayavani |

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ರಾಬರ್ಟ್‌’ ಚಿತ್ರ ಬಾಕ್ಸಾಫೀಸ್‌ನಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ 50 ಕೋಟಿ ಕ್ಲಬ್‌ ಸೇರಿದ್ದ ಚಿತ್ರ, ಸದ್ಯ ಶತಕೋಟಿ ಗಳಿಕೆಯತ್ತ ಮುನ್ನುಗ್ಗುತ್ತಿದೆ. “ರಾಬರ್ಟ್‌’ ಚಿತ್ರ ಇಷ್ಟೊಂದು ಸಕ್ಸಸ್‌ ಕಾಣುತ್ತಿರುವುದು, ಚಿತ್ರತಂಡದ ದೊಡ್ಡ ಖುಷಿಗೆ ಕಾರಣವಾಗಿದೆ. ಇದೀಗ “ರಾಬರ್ಟ್‌’ ಚಿತ್ರದ ಇಂಥದ್ದೊಂದು ಸಕ್ಸಸ್‌ಗೆ ಕಾರಣರಾದ ಪ್ರೇಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ಚಿತ್ರತಂಡ ಮುಂದಾಗಿದೆ.

Advertisement

ಇದಕ್ಕಾಗಿ “ವಿಜಯ ಯಾತ್ರೆ’ ಹೆಸರಿನಲ್ಲಿ ಯಾತ್ರೆ ಕೈಗೊಂಡಿರುವ “ರಾಬರ್ಟ್‌’ ಚಿತ್ರತಂಡ, ಖುದ್ದಾಗಿ ಪ್ರೇಕ್ಷಕರು ಮತ್ತು ಅಭಿಮಾನಿಗಳನ್ನು ಭೇಟಿಯಾಗಲು ನಿರ್ಧರಿಸಿದೆ. ಇದೇ ಮಾರ್ಚ್‌ 29 ರಿಂದ ಆರಂಭವಾಗಲಿರುವ “ರಾಬರ್ಟ್‌ ವಿಜಯ ಯಾತ್ರೆ’ ಏಪ್ರಿಲ್‌ 1ರ ವರೆಗೂ ಸುಮಾರು ನಾಲ್ಕು ದಿನಗಳ ಕಾಲ ನಡೆಯಲಿದೆ.

ಮಾರ್ಚ್‌ 29 ರಂದು ತುಮಕೂರಿನಿಂದ “ವಿಜಯ ಯಾತ್ರೆ’ಗೆ ಚಾಲನೆ ಸಿಗಲಿದೆ. ಮೊದಲ ದಿನ ತುಮಕೂರಿನಲ್ಲಿ ಅಭಿಮಾನಿಗಳು ಮತ್ತು ಪ್ರೇಕ್ಷಕರನ್ನು ಭೇಟಿಯಾಗಲಿರುವ “ರಾಬರ್ಟ್‌’ ಚಿತ್ರತಂಡ ಬಳಿಕ ಚಿತ್ರದುರ್ಗ, ದಾವಣಗೆರೆಗೆ ತಲುಪಲಿದೆ. ಮಾರ್ಚ್‌ 30ಕ್ಕೆ ಧಾರವಾಡ, ಹುಬ್ಬಳ್ಳಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ “ರಾಬರ್ಟ್‌’ ಚಿತ್ರತಂಡ ಅಭಿಮಾನಿಗಳನ್ನು ಭೇಟಿ ಮಾಡಲಿದೆ.

ಇದನ್ನೂ ಓದಿ: ಸಂಜು ಬಾಬಾ ಮೆಚ್ಚುಗೆ ಪಡೆದ ‘ಯುವರತ್ನ’ ಟ್ರೇಲರ್‌  

ಮಾರ್ಚ್‌ 31ಕ್ಕೆ ಶಿವಮೊಗ್ಗ, ಹಾಸನ ಮತ್ತು ತಿಪಟೂರಿಗೆ ಭೇಟಿ ನೀಡಲಿರುವ ಚಿತ್ರತಂಡ, ಏಪ್ರಿಲ್‌ 1ಕ್ಕೆ ಹಳೇ ಮೈಸೂರು ಭಾಗದಲ್ಲಿ ಯಾತ್ರೆ ನಡೆಸಲಿದೆ. ಈ ವೇಳೆ ಗುಂಡ್ಲುಪೇಟೆ, ಮೈಸೂರು, ಮಂಡ್ಯ ಮತ್ತು ಮದ್ದೂರಿಗೆ ಭೇಟಿ ನೀಡಿ, ಅಭಿಮಾನಿಗಳಿಗೆ ಚಿತ್ರತಂಡ ಧನ್ಯವಾದ ತಿಳಿಸುವ ಮೂಲಕ “ರಾಬರ್ಟ್‌ ವಿಜಯ ಯಾತ್ರೆ’ ಅಂತಿಮವಾಗಲಿದೆ.

Advertisement

ಇನ್ನು “ರಾಬರ್ಟ್‌ ವಿಜಯ ಯಾತ್ರೆ’ಯಲ್ಲಿ ನಟಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರೊಂದಿಗೆ, ನಿರ್ಮಾಪಕ ಉಮಾಪತಿ ಶ್ರೀನಿವಾಸ್‌, ನಿರ್ದೇಶಕ ತರುಣ್‌ ಸುಧೀರ್‌, ನಟ ವಿನೋದ್‌ ಪ್ರಭಾಕರ್‌, ನಾಯಕ ನಟಿ ಆಶಾ ಭಟ್‌ ಸೇರಿದಂತೆ ಚಿತ್ರದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ‘ಓ ಮೈ ಲವ್‌’ ಚಿತ್ರಕ್ಕೆ ಮಗಧೀರ ನಟನ ಎಂಟ್ರಿ

Advertisement

Udayavani is now on Telegram. Click here to join our channel and stay updated with the latest news.

Next