Advertisement

ಸೇಲ್ಸ್‌ಮನ್‌ನ ಮನೆಗೆ ನುಗ್ಗಿ ದರೋಡೆ

11:56 AM Feb 06, 2018 | Team Udayavani |

ಬೆಂಗಳೂರು: ಮನೆಗೆ ನುಗ್ಗಿದ್ದ ದುಷ್ಕರ್ಮಿಗಳ ತಂಡವೊಂದು ಚಿನ್ನಾಭರಣ ಡೆಲವರಿ ಮಾಡುವ ಸೇಲ್ಸ್‌ಮನ್‌ ಕೈ-ಕಾಲು ಕಟ್ಟಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಹಣ ದೋಚಿ ಪರಾರಿಯಾಗಿರುವ ಘಟನೆ ಹಲಸೂರು ಗೇಟ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಜ.24ರಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚೆನ್ನೈನ ಕೇಸರ್‌ ಜ್ಯುವೆಲ್ಲರಿಯಲ್ಲಿ ಸೇಲ್ಸ್‌ಮನ್‌ ಆಗಿರುವ ನಗರದ ಸಂತೋಷ್‌ ಚೆನ್ನೈನಿಂದ ಚಿನ್ನಾಭರಣಗಳನ್ನು ತಂದು ನಗರದ ವಿವಿಧ ಮಳಿಗೆಗಳಿಗೆ ಪೂರೈಸುತ್ತಾರೆ. ಜ.22ರಂದು 2 ಕೆ.ಜಿ. ಚಿನ್ನಾಭರಣ ತಂದಿದ್ದು, ಒಂದೂವರೆ ಕೆ.ಜಿ ಚಿನ್ನಾಭರಣ ಸರಬರಾಜು ಮಾಡಿ 4.95 ಲಕ್ಷ ರೂ. ತಮ್ಮ ಬಳಿ ಇಟ್ಟುಕೊಂಡಿದ್ದರು.

Advertisement

ಜ.24ರಂದು ಬೆಳಗ್ಗೆ 9 ಗಂಟೆಗೆ ಮಹಿಳೆಯೊಬ್ಬರು ಸುಗಂಧ ದ್ರವ್ಯ ಮಾರಾಟ ನೆಪದಲ್ಲಿ ಸಂತೋಷ್‌ ಮನೆ ಬಂದಿದ್ದಾರೆ. ಇದೇ ವೇಳೆ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಹಿಡಿದು ಏಕಾಏಕಿ ಸಂತೋಷ್‌ ಮೇಲೆ ದಾಳಿ ನಡೆಸಿ, ಕೈ-ಕಾಲು ಕಟ್ಟಿ, ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಸಂತೋಷ್‌ ಹಲಸೂರು ಗೇಟ್‌ ಠಾಣೆಗೆ ದೂರು ನೀಡಿದ್ದು, ಆರೋಪಿಗಳ ಪತ್ತೆಗಾಗಿ ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next