Advertisement

ಸಿಬ್ಬಂದಿಯನ್ನು ಬೆದರಿಸಿ ಪೆಟ್ರೋಲ್ ಬಂಕ್ ನಿಂದ ನಗದು ದೋಚಿದ ದರೋಡೆಕೋರರು

04:33 PM Sep 20, 2020 | keerthan |

ಬಂಟ್ವಾಳ: ತಾಲೂಕಿನ ಸೂರಿಕುಮೇರು ಸಮೀಪದ ದಾಸಕೋಡಿ ಪೆಟ್ರೋಲ್ ಬಂಕ್ ಗೆ ರವಿವಾರ ಮುಂಜಾನೆ ಆಗಮಿಸಿದ ತಂಡವೊಂದು ಸಿಬ್ಬಂದಿಯನ್ನು ಬೆದರಿಸಿ ನಗದು ದೋಚಿದ ಘಟನೆ ನಡೆದಿದೆ.

Advertisement

ರವಿವಾರ ಮುಂಜಾನೆ ಬೈಕಿನಲ್ಲಿ ಬಂದ ಮೂವರು ವ್ಯಕ್ತಿಗಳು ಇಬ್ಬರು ಕೆಲಸಗಾರರಿಗೆ ಚೂರಿ ಹಾಗೂ ರಾಡ್ ತೋರಿಸಿ ಹಣ ನೀಡುವಂತೆ ಒತ್ತಾಯಿಸಿದ್ದು, ಹಣ ನೀಡದಿದ್ದಲ್ಲಿ ಕೊಲ್ಲುವುದಾಗಿ ಬೆದರಿಸಿದ್ದಾರೆ. ಬಳಿಕ 22 ಸಾವಿರ ರೂ.ಗಳನ್ನು ದೋಚಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಪಿಎಸ್ಐ ಕಲೈಮಾರ್, ಎ.ಎಸ್.ಐ. ಶೈಲೇಶ್, ಹೆಚ್.ಸಿ.ಸುರೇಶ್ ಪಡಾರ್, ಕೃಷ್ಣ ಕುಲಾಲ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕಳ್ಳರ ತಂಡ ಬಂಟ್ವಾಳ ಸೇರಿದಂತೆ ಮಂಗಳೂರಿನ ಹಲವು ಪೆಟ್ರೋಲ್ ಬಂಕ್ ಗಳಿಗೆ ನುಗ್ಗಿ ಹಣ ದೋಚುವುದಕ್ಕೆ ಪ್ರಯತ್ನಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next