Advertisement

ರಸ್ತೆ ಕಾಮಗಾರಿಗೆ ಚಾಲನೆ

04:56 PM Jun 01, 2020 | Suhan S |

ಕಾರಟಗಿ: ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಎಸ್‌ಎಫ್‌ಸಿ ವಿಶೇಷ ಯೋಜನೆಯಡಿ ಎರಡು ವಾರ್ಡ್ ಗಳಲ್ಲಿ ಸುಸಜ್ಜಿತ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.

Advertisement

ಶನಿವಾರ ಪಟ್ಟಣದ 12ನೇ ವಾರ್ಡ್‌ನ ರಾಜೀವ್‌ ಗಾಂಧಿ  ನಗರದಲ್ಲಿ ಹಾಗೂ 9ನೇ ವಾರ್ಡ್‌ನ ಬಸವೇಶ್ವರ ನಗರದಲ್ಲಿ ಕಾಂಕ್ರೀಟ್‌ ರಸ್ತೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಪಟ್ಟಣದ 9 ಮತ್ತು 12ನೇ ವಾರ್ಡ್‌ ನಿವಾಸಿಗಳ ಬಹುದಿನದ ಬೇಡಿಕೆ ಮೇರೆಗೆ ವಾರ್ಡ್‌ನಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಉಭಯ ವಾರ್ಡ್‌ಗಳಲ್ಲಿ ಕೂಲಿ ಕಾರ್ಮಿಕರೇ ಸಾಕಷ್ಟು ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಅಲ್ಲಿನ ನಿವಾಸಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ. ಕಾಂಕ್ರೀಟ್‌ ರಸ್ತೆ ನಿರ್ಮಾಣದಲ್ಲಿ ಯಾವುದೇ ಲೋಪ ದೋಷಗಳ ನಡೆಯದಂತೆ ರಸ್ತೆ ನಿರ್ಮಿಸಲೂ ಸೂಚಿಸಲಾಗಿದೆ ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಎನ್‌. ಶಿವಲಿಂಗಪ್ಪ, ರಾಘವೇಂದ್ರ, ಮಂಜುನಾಥ, ನಾಗರಾಜ ತಳವಾರ, ಚನ್ನಬಸವ, ಪುರಸಭೆ ಸದಸ್ಯರಾದ ಚನ್ನಮ್ಮ ಶೀಲವಂತರ, ಜಿ. ತಿಮ್ಮನಗೌಡ, ಸಂಗನಗೌಡ, ಮಾಹಾದೇವಿ ಭಜಂತ್ರಿ, ಯೂಸುಫ್‌, ಪ್ರಮುಖರಾದ ಹರೆಬಸಪ್ಪ ಸಜ್ಜನ, ನಾಗರಾಜ ಬಿಲ್ಗಾರ, ಚನ್ನಬಸವ ಸುಂಕದ, ಅಮರೇಶ ಪಾಟೀಲ್‌, ಶಿವಶರಣೆಗೌಡ, ಜೆ. ರಾಮರಾವ್‌, ಶಿವು ಶೀಲವಂತರ, ಕರಿಬಸಪ್ಪ ಬೂದಗುಂಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next