Advertisement

ರ‌ಸ್ತೆ ಕಾಮಗಾರಿ: ಸಾರ್ವಜನಿಕ ಹಿತ ಕಾಪಾಡಲು ಡಿ.ಸಿ.ಗೆ ಮನವಿ

01:00 AM Mar 20, 2019 | Team Udayavani |

ಮಣಿಪಾಲ: ಉಡುಪಿ – ಮಣಿಪಾಲ ಮೂಲಕ ಹಾದು ಹೋಗುವ ರಾ. ಹೆದ್ದಾರಿಯ ಕಾಮಗಾರಿಯ  ಸಂದರ್ಭದಲ್ಲಿ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಗಳಾಗುತ್ತಿದ್ದು, ಈ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು  ಜೆಸಿಐ ಉಡುಪಿ ಇಂದ್ರಾಳಿಯ ಸದಸ್ಯರು ಜಿಲ್ಲಾಧಿಕಾರಿ  ಹೆಪ್ಸಿಬಾರಾಣಿ ಕೊರ್ಲಪಾಟಿ ಅವರನ್ನು ಭೇಟಿ ಮಾಡಿ  ಮನವಿ ಮಾಡಿಕೊಂಡರು.

Advertisement

ಮಣಿಪಾಲದ  ಈಶ್ವರನಗರ, ಎಂ.ಐ.ಟಿ., ಕ್ಯಾನ್ಸರ್‌ ಆಸ್ಪತ್ರೆ ಎದುರು, ಅಂಚೆ ಕಚೇರಿ ಬಳಿ, ಸಿಂಡಿಕೇಟ್‌ ಸರ್ಕಲ್‌, ಇಂದ್ರಾಳಿ ರೈಲ್ವೆ ಸೇತುವೆ ಬಳಿ ಟ್ರಾಫಿಕ್‌ ಜಾಮ್‌ ಸಂಭವಿಸುತ್ತಿದೆ.  ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಟ್ರಾಫಿಕ್‌ ಜಾಮ್‌ನಿಂದಾಗಿ  ತೊಂದರೆಗಳಾಗುತ್ತಿದೆ.  ಸಂಭಾವ್ಯ ಅಪಘಾತವನ್ನು ತಪ್ಪಿಸಲು ಮತ್ತು ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳನ್ನು  ನಿವಾರಿಸಬೇಕು.

ಹಳೆ ರಸ್ತೆ ಮತ್ತು ಹೊಸ ರಸ್ತೆಗೆ ಹತ್ತುವಾಗ  ಉಂಟಾಗುವ  ವಿಪರೀತ ಧೂಳಿನಿಂದಾಗಿ  ಜನರು ಕೆಲವು ಕಾಯಿಲೆಗಳಿಗೆ ತುತ್ತಾಗುವ  ಸಂಭವವಿದೆ ಎಂದು ಮನವಿ ಮಾಡಿಕೊಂಡರು. 

ಮನವಿಗೆ ಸ್ಪಂದಿಸಿದ ಜಿÇÉಾಧಿಕಾರಿ ಅವರು ಶೀಘ್ರವಾಗಿ ಸಮಸ್ಯೆ ಬಗೆಹರಿಸುವ ಬಗ್ಗೆ  ಭರವಸೆ ನೀಡಿದರು. 
ಜೇಸಿಐ ಸ್ಥಾಪಕ ಮನೋಜ್‌ ಕಡಬ, ಅಧ್ಯಕ್ಷ ಅಶೋಕ್‌ ಪೂಜಾರಿ, ವಲಯಾಧಿಕಾರಿ  ಶೆರ್ಲಿ ಮನೋಜ್‌, ಕಾರ್ಯದರ್ಶಿ ರಾಧಾಕೃಷ್ಣ, ಮಹಿಳಾ ವಿಭಾಗದ ಅಧ್ಯಕ್ಷೆ ಮಮತಾ, ಸದಸ್ಯರು  ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next