Advertisement

ರಸ್ತೆ ಕಾಮಗಾರಿ ಪೂರ್ಣ : ಸುಗಮ ಸಂಚಾರಕ್ಕೆ ಅನುಕೂಲ

07:49 AM Jan 14, 2019 | Team Udayavani |

ಚಿಂಚೋಳಿ: ತಾಲೂಕಿನ ತೆಲಂಗಾಣ ಗಡಿಭಾಗಕ್ಕೆ ಹೊಂದಿಕೊಂಡಿರುವ ಕುಂಚಾವರಂ-ಪೆದ್ದಾತಾಂಡಾ, ವಂಟಿಚಿಂತಾ-ಗೋಪುನಾಯಕ-ಧರ್ಮಸಾಗರ ಗ್ರಾಮದ ವರೆಗೆ ನಡೆಯುತ್ತಿರುವ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣ ಕಾಮಗಾರಿ ಪೂರ್ಣಗೊಂಡಿದ್ದು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ.

Advertisement

ಗಡಿಯಲ್ಲಿರುವ ಅತಿ ಹಿಂದುಳಿದ ತಾಂಡಾ, ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಮತ್ತು ಅನೇಕ ವರ್ಷಗಳಿಂದ ರಸ್ತೆಗಳನ್ನೇ ಕಾಣದೆ ಹದಗೆಟ್ಟಿರುವ ರಸ್ತೆ ಸುಧಾರಣೆಗೆ ಶಾಸಕ ಡಾ| ಉಮೇಶ ಜಾಧವ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್‌ ಇಲಾಖೆಯ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಒಟ್ಟು 13 ಕಿ.ಮೀ ರಸ್ತೆ ಸುಧಾರಣೆಗಾಗಿ ಸರಕಾರದಿಂದ 8.19 ಕೋಟಿ ರೂ. ಮಂಜೂರಿಗೊಳಿಸಿದ್ದಾರೆ. 2017 ಅಕ್ಟೋಬರ್‌ 7ರಂದು ಪ್ರಾರಂಭಗೊಳಿಸಿದ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣ ಕಾಮಗಾರಿ ಕಳೆದ ಡಿಸೆಂಬರ್‌ 18ಕ್ಕೆ ಪೂರ್ಣಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next