Advertisement
ಮೋಟಾರು ವಾಹನ ಕಾಯ್ದೆ 2019ರ ಪರಿಣಾಮಕಾರಿ ಅನುಷ್ಠಾನ ಮತ್ತು ರಸ್ತೆ ಸುರಕ್ಷತೆ ಕುರಿತಂತೆ ಬೆಂಗಳೂರಿನ ಪಬ್ಲಿಕ್ ಅಫೇರ್ ಫೌಂಡೇಶನ್ ಮತ್ತು ಕಟ್ಸ್ (ಕನ್ಸ್ಯೂಮರ್ ಯೂನಿಟಿ ಆ್ಯಂಡ್ ಟ್ರಸ್ಟ್ ಸೊಸೈಟಿ) ಇಂಟರ್ ನ್ಯಾಶನಲ್ ವತಿಯಿಂದ ಬುಧವಾರ ನಗರದಲ್ಲಿ ನಡೆದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ರಸ್ತೆಗಳು ಸುರಕ್ಷಿತವಾಗಿದ್ದರೂ, ಬಳಕೆದಾರರಾದ ನಾವು ನಮ್ಮ ನಡವಳಿಕೆ ಬದಲಾಯಿಸಿ, ಸಂಚಾರ ನಿಯಮಗಳ ಸಮರ್ಪಕ ಪಾಲನೆ ಮಾಡಿ ಎಚ್ಚರಿಕೆಯಿಂದ ಇದ್ದರೆ ಸಂಭಾವ್ಯ ಅಪಘಾತಗಳನ್ನು ತಡೆಯಲು ಸಾಧ್ಯವಿದೆ ಎಂದ ಅವರು ಈ ವಿಚಾರವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ರಸ್ತೆ ಸುರಕ್ಷತ ಸಮಿತಿಯ ಸಭೆಗಳನ್ನು ನಿಯಮಿತವಾಗಿ ನಡೆಸಲಾಗುವುದು ಎಂದರು.
ರಸೆ ಸುರಕ್ಷತೆ ಮತ್ತು ಮೋಟಾರು ವಾಹನ ಕಾಯ್ದೆ ಕುರಿತು ಕೈಪಿಡಿಯೊಂದನ್ನು ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಸಹಾಯದಿಂದ ತಯಾರಿಸಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ 2022ರ ಜನವರಿಯಲ್ಲಿ ಹಂಚುವ ಚಿಂತನೆಯಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. ಇದನ್ನೂ ಓದಿ:ನಮ್ಮನ್ನು ಕಡೆಗಣಿಸಿದ್ದರಿಂದಲೇ ಪರಿಷತ್ ಚುನಾವಣೆಯಲ್ಲಿ ಹಿನ್ನಡೆ ಆಯ್ತು; ಯತ್ನಾಳ್ ಕಿಡಿ
Related Articles
Advertisement
ವಿವಿಧ ವಿಷಯಗಳ ಬಗ್ಗೆ ವಿಚಾರ ಮಂಡನೆ ನಡೆಯಿತು. ಜಿ.ಪಂ. ಸಿಇಒ ಡಾ| ಕುಮಾರ್ ಸಮಾರೋಪ ಭಾಷಣ ಮಾಡಿದರು. ಬೆಂಗಳೂರಿನ ಪಬ್ಲಿಕ್ ಅಫೇರ್ ಫೌಂಡೇಶನ್ ಕಾರ್ಯ ನಿರ್ವಾಹಕ ನಿರ್ದೇಶಕಿ ಡಾ| ಅನ್ನ ಪೂರ್ಣ ರವಿಚಂದರ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.