Advertisement

Road Mishap; ಟ್ರ್ಯಾಕ್ಟರ್- ಬಸ್ ಢಿಕ್ಕಿ; ಚಾಲಕನಿಗೆ ಗಾಯ

06:06 PM Oct 28, 2023 | Team Udayavani |

ಗುಡಿಬಂಡೆ: ಗೌರಿಬಿದನೂರಿನಿಂದ ಬಾಗೇಪಲ್ಲಿ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಟ್ರ್ಯಾಕ್ಟರ್ ನಡುವೆ ಢಿಕ್ಕಿ ಸಂಭವಿಸಿದ್ದು, ಸಾರಿಗೆ ಬಸ್ ಚಾಲಕನ ಕಾಲಿಗೆ ಗಾಯವಾದ ಘಟನೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

Advertisement

ತಾಲೂಕಿನ ಯರ್ರಹಳ್ಳಿ ಗ್ರಾಮದ ಬಳಿ ಬಾಗೇಪಲ್ಲಿ ಕೆ.ಎಸ್.ಆರ್.ಟಿ.ಸಿ. ಘಟಕಕ್ಕೆ ಸೇರಿದ ಬಸ್ ಗೌರಿಬಿದನೂರಿನಿಂದ ಬಾಗೇಪಲ್ಲಿಗೆ ಬರುತ್ತಿದ್ದ ವೇಳೆ ಟ್ರ್ಯಾಕ್ಟರ್ ಹಾಗೂ ಬಸ್ ನಡುವಿನ ಅಪಘಾತದಲ್ಲಿ ಸಾರಿಗೆ ಬಸ್ ಚಾಲಕ ನಾಗರಾಜ್.ಕೆ.ಎನ್ (32) ಎಂಬುವವರ ಕಾಲಿಗೆ ಗಾಯವಾಗಿದ್ದು, ಬಸ್ ನಲ್ಲಿ ಇದ್ದ ಮೂರು ಪ್ರಯಾಣಿಕರಿಗೂ ಸಹ ಸಣ್ಣ ಪುಟ್ಟ ಗಾಯಗಳಾದ ಘಟನೆ ನಡೆದಿದೆ.

ಸ್ಥಳಕ್ಕೆ ಗುಡಿಬಂಡೆ ಪೊಲೀಸ್ ಸಿಬ್ಬಂದಿ ಮತ್ತು ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next