Advertisement

Accident: ಬೈಕ್-ಕ್ಯಾಂಟರ್ ಮುಖಾಮುಖಿ ಢಿಕ್ಕಿ: ಸವಾರ ಸ್ಥಳದಲ್ಲೇ ಸಾವು, ಯುವತಿಯ ನಾಲಿಗೆ ಕಟ್

02:56 PM May 27, 2024 | Team Udayavani |

ಚಿಕ್ಕಮಗಳೂರು: ಬೈಕ್-ಕ್ಯಾಂಟರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಹಿಂಬದಿ ಇದ್ದ ಯುವತಿಯ ನಾಲಿಗೆ ಕಟ್ ಆಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಬಳಿ ನಡೆದಿದೆ.

Advertisement

ಶಿವರಾಜ್(26) ಮೃತ ದುರ್ದೈವಿ, ಲಾವಣ್ಯ(20) ನಾಲಿಗೆ ಕಳೆದುಕೊಂಡ ಯುವತಿ.

ಲಾವಣ್ಯ ಹಾಗೂ ಶಿವರಾಜ್‌ ಬೈಕ್‌ ನಲ್ಲಿ ಹೋಗುತ್ತಿರಬೇಕಾದರೆ ಎದುರು ಕಡೆಯಿಂದ ಬಂದ ಕ್ಯಾಂಟರ್‌ ಗೆ ಮುಖಾಮುಖಿ ಢಿಕ್ಕಿ ಆಗಿದೆ. ಪರಿಣಾಮ ಈ ಘಟನೆ ನಡೆದಿದೆ.

ಶಿವರಾಜ್-ಲಾವಣ್ಯ ಇಬ್ಬರು  ಅರಸೀಕೆರೆ ತಾಲೂಕಿನ ಬಂದೂರು ಮೂಲದವರು. ಲಾವಣ್ಯ ಚಿಕ್ಕಮಗಳೂರಿನ ವಿದ್ಯಾರ್ಥಿ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್ ಓದುತ್ತಿದ್ದಾರೆ.

ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next