Advertisement

Road Mishap:ಪತ್ನಿ ಕರೆ ತರಲು ಬೈಕ್‌ನಲ್ಲಿ ತೆರಳುತ್ತಿದ್ದ ಪತಿ ಸಾವು

11:09 AM Oct 16, 2023 | Team Udayavani |

ಬೆಂಗಳೂರು: ಜಾಲಹಳ್ಳಿ ಸಂಚಾರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪತ್ನಿಯನ್ನು ರೈಲು ನಿಲ್ದಾಣದಿಂದ ಕರೆ ತರಲು ಬೈಕ್‌ನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿದ್ದಾರೆ.

Advertisement

ಕೈಮಗ್ಗ ನೌಕರ  ಮಂಜುನಾಥ (41) ಮೃತ ದುರ್ದೈವಿ.

ಶನಿವಾರ ಮಹಾ ಲಯ ಅಮಾವಾಸ್ಯೆ ನಿಮಿತ್ತ ಮಂಜು ನಾಥ್‌ ಪಿತೃಪಕ್ಷದ ಪೂಜೆಗಾಗಿ  ಹೆಸರು ಘಟ್ಟ ರಸ್ತೆಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ತುಮಕೂರಿನಿಂದ ಹೆಸರುಘಟ್ಟ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಪತ್ನಿಯನ್ನು ಕರೆತರಲು ಬೈಕ್‌ನಲ್ಲಿ ಹೋಗುತ್ತಿದ್ದಾಗ ಮಾರ್ಗಮಧ್ಯೆ ಜಾಲಹಳ್ಳಿ ಬಳಿ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದಿದ್ದರು. ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next