Advertisement

ಒತ್ತಿನೆಣೆ ಹೆದ್ದಾರಿಯಲ್ಲಿ ಲಾರಿ ಉರುಳಿ ಕಾರಿಗೆ ಡಿಕ್ಕಿ, ಲಾರಿ ಚಾಲಕ ಸಾವು

06:20 PM Jan 10, 2021 | Team Udayavani |

ಬೈಂದೂರು: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಉರುಳಿ ಬಿದ್ದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಮೃತ ಪಟ್ಟ ಘಟನೆ ಬೈಂದೂರು ಸಮೀಪದ ಒತ್ತಿನೆಣೆ ಬಳಿ ರವಿವಾರ ನಡೆದಿದೆ.

Advertisement

ಮಾಹರಾಷ್ಟ್ರದಿಂದ ಮಂಗಳೂರು ಕಡೆಗೆ ಬೇಕರಿ ಸಾಮಾನು ತುಂಬಿದ ಲಾರಿ ಒತ್ತಿನೆಣ್ಣೆ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ ಈ ವೇಳೆ ಕಾರಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ಲಾರಿ ಚಾಲಕ ರಾಮಪ್ರಸಾದ್ ಪವಾರ್ (35) ಲಾರಿಯಡಿಗೆ ಸಿಲುಕಿ ಮೃತ ಪಟ್ಟಿದ್ದಾನೆ.

ಘಟನೆಯಲ್ಲಿ ಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆ.ಅವರನ್ನು ಆಸ್ಪತ್ರಗೆ ಸಾಗಿಸಲಾಗಿದೆ.

ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ದೆಹಲಿ ಭೇಟಿ ತೃಪ್ತಿ ನೀಡಿದೆ : ಆದಷ್ಟು ಬೇಗ ಶುಭ ಸುದ್ದಿ ಸಿಗಲಿದೆ : ಬಿಎಸ್ ವೈ

Advertisement
Advertisement

Udayavani is now on Telegram. Click here to join our channel and stay updated with the latest news.

Next