Advertisement

ಭೀಕರ ರಸ್ತೆ ಅಪಘಾತ: ಸ್ನೇಹಿತನ ಶವ ಸಂಸ್ಕಾರಕ್ಕೆ ತೆರಳುತ್ತಿದ್ದ ವ್ಯಕ್ತಿ ಮೃತ್ಯು

08:23 PM Feb 17, 2023 | Team Udayavani |

ಕೊರಟಗೆರೆ: ಪಟ್ಟಣದ ಬೈಪಾಸ್ ರಿಂಗ್ ರೋಡ್ ಭೋಡ ಬಂಡೇನಹಳ್ಳಿ ಕ್ರಾಸ್ ಬಳಿ ಲಾರಿ ಮತ್ತು ದ್ವಿಚಕ್ರ ವಾಹನ ಸವಾರನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿ ಚಕ್ರ ವಾಹನ ಸವಾರ ಸಾವಿಗೀಡಾದ ಘಟನೆ ಕೊರಟಗೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

Advertisement

ಬೈಕ್ ಸವಾರ ನವೀನ್ ಕುಮಾರ್( 32) ಮೃತಪಟ್ಟ ದುರ್ದೈವಿ ಯಾಗಿದ್ದಾನೆ.

ಘಟನೆಯ ವಿವರ:

ಬೆಂಗಳೂರು ಮೂಲದ‌ ಮಲ್ಲೇಶ್ವರಂ ನಿವಾಸಿಯಾದ ರಾಧಾಕೃಷ್ಣ ಶೆಟ್ಟಿ ರವರ ಮಗನಾದ ನವೀನ್ ಕುಮಾರ್ ಬೆಂಗಳೂರಿನಿಂದ ಪಾವಗಡಕ್ಕೆ ಸ್ನೇಹಿತನ ಶವ ಸಂಸ್ಕಾರಕ್ಕೆ ಹೋಗುತ್ತಿರುವಾಗ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ವೇಗವಾಗಿ‌ ಬಂದ ಲಾರಿಯು ನವೀನ್ ಸಂಚರಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ ಪರಿಣಾಮ ಗಂಭೀರ ಗಾಯಗೊಂಡಿದ್ದ ಆತನನ್ನು ಅ್ಯಂಬುಲೆನ್ಸ್ ಸಹಾಯ ದಿಂದ ಕೊರಟಗೆರೆ ಸಾರ್ವಜನಿಕ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾಸ್ಪತ್ರೆಗೆ ಕರೆದೊಯ್ಯವಾಗ ಮಾರ್ಗ ಮಧ್ಯೆ ಮೃತ ಪಟ್ಟಿದ್ದಾನೆಂದು ತಿಳಿದು ಬಂದಿದೆ.

ಈ ಸಂಭಂದ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಐಪಿಸಿ 304(A) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ ಸುರೇಶ್ ಕೆ ಪಿಎಸ್ಐ ಪ್ರದೀಪ್ ಸಿಂಗ್, ಎಎಸ್ಐ ಗೋವಿಂದ ನಾಯ್ಕ್ ಮುಖ್ಯಪೇದೆ ಸಂಜೀವ್, ರಂಗರಾಜು, ಜಯಪ್ರಕಾಶ್ ಪೇದೆ ಧರ್ಮಪಾಲ್ ನಾಯಕ್ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Advertisement

ಇದನ್ನೂ ಓದಿ: ಫೆ.20ರಂದು ಜೆ.ಪಿ.ನಡ್ಡಾ ಪ್ರವಾಸ: ಉಡುಪಿ ಜಿಲ್ಲಾ ಬಿಜೆಪಿ ಬೂತ್‌ ಸಮಾವೇಶಕ್ಕೆ ಚಪ್ಪರ ಮಹೂರ್ತ

Advertisement

Udayavani is now on Telegram. Click here to join our channel and stay updated with the latest news.

Next