Advertisement

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು : ಮಹಿಳೆ ಸಾವು

11:58 AM Dec 30, 2021 | Team Udayavani |

ಬಾಳೆಹೊನ್ನೂರು : ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡ ಘಟನೆ ಸೀಗೋಡು ಎಸ್ಟೇಟ್‌ ಬಳಿ ಸಂಭವಿಸಿದೆ.

Advertisement

ಬೆಂಗಳೂರಿನ ಮಾರತನಹಳ್ಳಿಯ ಗೀತಾ (28) ಸ್ಥಳದಲ್ಲೇ ಮೃತಪಟ್ಟಿದ್ದು ಅವಿನಾಶ್‌, ದಿವ್ಯಾ ಅವರು ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ 6 ವರ್ಷದ ಪ್ರಜ್ವಲ್‌ ಹಾಗೂ ಚಂದ್ರು ಅವರಿಗೆ ಯಾವುದೇ ಗಾಯ ಗಳಾಗಿಲ್ಲ. ಇವರೆಲ್ಲ ಶೃಂಗೇರಿಯಿಂದ ಹೊರನಾಡಿಗೆ ತೆರಳುತ್ತಿದ್ದರು ಎನ್ನಲಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆ್ಯಂಬುಲೆನ್ಸ್‌ ಇಲ್ಲದೆ ಪಿಕ್‌ಆಪ್‌ ವ್ಯಾನ್‌ ನಲ್ಲಿ ಮೃತ ದೇಹ ಸಾಗಿಸಲಾಯಿತು. ಗಾಯಾಳುಗಳನ್ನು ಎನ್‌.ಆರ್‌.ಪುರದಿಂದ ಬಂದ ಆ್ಯಂಬುಲೆನ್ಸ್‌ನಲ್ಲಿ ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಕುರಿತು ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ನಾಯಿಗೆ ಕಲ್ಲು: ಉಡುಪಿಯಲ್ಲಿ ಎರಡು ಕುಟುಂಬಗಳ ನಡುವೆ ತಾರಕಕ್ಕೇರಿದ ಜಗಳ

Advertisement

Udayavani is now on Telegram. Click here to join our channel and stay updated with the latest news.

Next