Advertisement

ವಿಜಯಪುರ: ಬೈಕಿಗೆ ಡಿಕ್ಕಿ ಹೊಡೆದ ಕಾರು, ತಂದೆ ಮಗಳು ಸ್ಥಳದಲ್ಲೇ ಸಾವು

04:37 PM Dec 28, 2020 | sudhir |

ವಿಜಯಪುರ : ಜಿಲ್ಲೆಯ ಕೊಲ್ಹಾರದ ಯುಕೆಪಿ ಕ್ಯಾಂಪ್ ನಿಂದ ಬಸವನಬಾಗೇವಾಡಿಗೆ ಹೋಗುವ ಮಾರ್ಗದ ಬನ್ನಿಹಳ್ಳದ ಹತ್ತಿರ ಬೈಕ್ ಹಾಗೂ ಕಾರಿನ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಹಾಗೂ ಆತನ 3 ವರ್ಷದ ಮಗಳು ಸ್ಥಳದಲ್ಲಿ ಸಾವಿಗಿಡಾದ ದುರಂತ ಸಂಭವಿಸಿದೆ.

Advertisement

ಮೃತರನ್ನು ಬಬಲೇಶ್ವರ ತಾಲ್ಲೂಕಿನ ಮದಗುಣಕಿ ಗ್ರಾಮದ ಧರೇಪ್ಪ ಅರವಿಂದ ಶಿವನ್ನವರ(28) ಮತ್ತು ಆತನ 3 ವರ್ಷದ ಮಗಳು ಸಾನ್ವಿಕಾ ಎಂದು ಗುರುತಿಸಲಾಗಿದೆ.

ಮದಗುಣಕಿ ಗ್ರಾಮದ ಅರವಿಂದ ಕುಟುಂಬ ಕಳೆದ ಕೆಲ ವರ್ಷಗಳಿಂದ ಕೊಲ್ಹಾರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಕೃಷಿ ಕೆಲಸ ಮಾಡಿಕೊಂಡಿತ್ತು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಬ್ರಿಟಿಷ್ ರಿಗೆ ಮುಚ್ಚಳಿಕೆ ಬರೆದುಕೊಟ್ಟ ಬಿಜೆಪಿಯವರದ್ದು ದೇಶ ಭಕ್ತಿಯಾ? ಸಿದ್ದರಾಮಯ್ಯ

ಈ ಕುರಿತು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next