Advertisement

ಉಳವಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಹಳಿಯಾಳದಲ್ಲಿ ಘೋಟ್ನೇಕರ ಆಗ್ರಹ

10:02 AM Dec 07, 2021 | Team Udayavani |

ಹಳಿಯಾಳ: ಉಳವಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಆರಂಭವಾಗ ಗಟಾರದ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು, ಕಾಮಗಾರಿಗೆ ವೇಗವನ್ನು ನೀಡಿ, ತ್ವರಿತಗತಿಯಲ್ಲಿ ಮುಗಿಸುವಂತೆ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ ಆಗ್ರಹಿಸಿದ್ದಾರೆ.

Advertisement

ಅವರು ಹಳಿಯಾಳ ಪಟ್ಟಣದಲ್ಲಿರುವ ಅವರ ಕಚೇರಿಯಲ್ಲಿ ಮಂಗಳವಾರ ಸುದ್ಧಿಗಾರರೊಂದಿಗೆ ಮಾತನಾಡಿ, ಕಾಮಗಾರಿ ವಿಳಂಭವಾಗಿ ಸಾಗುತ್ತಿರವುದರಿಂದ ಸ್ಥಳೀಯರಿಗೆ ತೊಂದರೆಯಾಗಿದೆ. ಇದೇ ಬರುವ ಫೆಬ್ರವರಿ ತಿಂಗಳಿನಲ್ಲಿ ಉಳವಿ ಜಾತ್ರೆಯು ನಡೆಯಲಿರುವುದು ಗೊತ್ತಿದ್ದರೂ ಲೋಕೋಪಯೋಗಿ ಇಲಾಖೆ ನಿದ್ರಾವಸ್ಥೆಯಲ್ಲಿದೆ. ಕೂಡಲೆ ಕಾಮಗಾರಿಯನ್ನು ಮುಗಿಸಬೇಕು, ಇಲ್ಲವಾದಲ್ಲಿ ಜೋಯಿಡಾದ ಲೋಕೋಪಯೋಗಿ ಇಲಾಖೆಯ ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next