Advertisement

ಇಲ್ಲಿ ರಸ್ತೆ ಕುಸಿದರೆ ಬ್ಯಾರಿಕೇಡ್‌ ಪರಿಹಾರ!

02:25 AM Jul 04, 2018 | Team Udayavani |

ಬೆಳ್ತಂಗಡಿ: ಬಿ.ಸಿ. ರೋಡ್‌-ಚರ್ಮಾಡಿ ರಾ.ಹೆ.ಯ ಉಜಿರೆ ಪೇಟೆಯ ಸಮೀಪ ಹೆದ್ದಾರಿ ತಡೆಗೋಡೆ ಕುಸಿದಿದ್ದು, ಅದನ್ನು ದುರಸ್ತಿ ಮಾಡದೇ ಇರುವುದರಿಂದ ಮತ್ತಷ್ಟು ಕುಸಿಯುವ ಭೀತಿ ಇದೆ. ಅಲ್ಲಿ ಮರಳು ತುಂಬಿದ ಗೋಣಿ ಹಾಗೂ ಬ್ಯಾರಿಕೇಡ್‌ ಇಟ್ಟು ಇಲಾಖೆ ಸುಮ್ಮನೆ ಕೂತಿದೆ.! ಈ ಭಾಗದಲ್ಲಿ ಸುಮಾರು ನೂರು ಅಡಿಯವರೆಗೆ ಹೆದ್ದಾರಿ ಬದಿಯ ಚರಂಡಿಗೆ ತಡೆಗೋಡೆ ನಿರ್ಮಿಸಲಾಗಿದ್ದು, ಪ್ರಸ್ತುತ ವಾಹನ ಸಂಚಾರದ ಒತ್ತಡಕ್ಕೆ ತಡೆಗೋಡೆಯು ಬಹುತೇಕ ಚರಂಡಿ ಕಡೆಗೆ ವಾಲಿಕೊಂಡಿದೆ. ಆದರೆ ಮುಂದೆ ಮಳೆ ಪ್ರಮಾಣ ಹೆಚ್ಚಾದರೆ ಉಳಿದ ಭಾಗವೂ ಕುಸಿಯುವ ಸಾಧ್ಯತೆ ಹೆಚ್ಚಿದೆ.

Advertisement

ಪ್ರಸ್ತುತ ಅಪಾಯಕಾರಿ ತಿರುವಿನಲ್ಲಿ ಹೆದ್ದಾರಿ ತಡೆಗೋಡೆ ಕುಸಿದಿದ್ದು, ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಿಲ್ಲ. ಆದರೆ ಮುಂದೆ ಉಳಿದ ಭಾಗವೂ ಕುಸಿದರೆ ಹೆದ್ದಾರಿಗೂ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಜತೆಗೆ ಮಳೆ ನೀರು ಹರಿಯುವ ತೋಡು ಕೂಡ ಮುಚ್ಚಲಿದ್ದು, ನೀರು ರಸ್ತೆಗೆ ಬರುವ ಸಾಧ್ಯತೆಯೂ ಹೆಚ್ಚಿದೆ.
ಶಿರಾಡಿ ಘಾಟಿ ರಸ್ತೆ ಸಂಚಾರ ಮುಕ್ತ ಜು. 15ರವರೆಗೆ ಮುಂದೆ ಹೋಗಿರುವುದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರದ ಒತ್ತಡ ಇನ್ನಷ್ಟು ದಿನ ಮುಂದುವರಿಯಲಿದೆ. ಹೀಗಾಗಿ ಮತ್ತಷ್ಟು ಕುಸಿತ ಉಂಟಾಗಿ ಸಂಚಾರ ಮೊಟಕುಗೊಳ್ಳುವ ಮೊದಲು ಹೆದ್ದಾರಿ ಇಲಾಖೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next