Advertisement

ಖಾಸಗಿ ಬಸ್ ಢಿಕ್ಕಿಯಾಗಿ ಗುಂಡಿಗೆ ಉರುಳಿ ಬಿದ್ದ ಓಮ್ನಿ ವ್ಯಾನ್: ಅಜ್ಜಿ, ಮೊಮ್ಮಗಳು ಸಾವು

09:56 AM Mar 06, 2020 | keerthan |

ವಿಜಯಪುರ: ಓಮ್ನಿ ವ್ಯಾನ್ ಗೆ ಹಿಂಬದಿಯಿಂದ ಬಂದ ಖಾಸಗಿ ಬಸ್ ಢಿಕ್ಕಿಯಾಗಿ, ಓಮ್ನಿ ವ್ಯಾನು  ಗುಂಡಿಗೆ ಉರುಳಿ‌ ಬಿದ್ದು ಅಜ್ಜಿ, ಮೊಮ್ಮಗಳು ಮೃತಪಟ್ಟ ಘಟನೆ ಜಿಲ್ಲೆಯ ಕೊಲ್ಹಾರ ಬಳಿ ಜರುಗಿದೆ.

Advertisement

ಕೊಲ್ಹಾರ ಪಟ್ಟಣದ ಯುಕೆಪಿ ವೃತ್ತದಲ್ಲಿ ನಡೆಯುತ್ತಿರುವ ಅಂಡರ್ ಪಾಸ್ ಕಾಮಗಾರಿಯ ಗುಂಡಿ ತೋಡಿದ್ದು, ಬುಧವಾರ ತಡರಾತ್ರಿ ಮುಂದೆ ಹೊರಟಿದ್ದ ಓಮ್ನಿ ವ್ಯಾನ್ ಗೆ ಹಿಂದಿನಿಂದ ಬಂದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಓಮ್ನಿ ವ್ಯಾನ್ ನಲ್ಲಿದ್ದ ಚಾಂದಬೀ ಅಂಗಡಿ (45) ಮಹೀರಾಬಾನು‌ ದೊಡಮನಿ (3) ಎಂದು ಗುರುತಿಸಲಾಗಿದೆ. ತೀವ್ರಗಾಯಗೊಂಡಿರುವ ನಾಲ್ವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬಳಿಕ ಚಾಲಕ, ಕ್ಲೀನರ್ ಸ್ಥಳದಲ್ಲೇ ಬಸ್ ಬಿಟ್ಟು ಪರಾರಿಯಾಗಿದ್ದು, ಪೊಲೀಸರು ಬಸ್ ವಶಕ್ಕೆ ಪಡೆದಿದ್ದಾರೆ.

ಅಂಡರ್ ಪಾಸ್ ಅವೈಜ್ಞಾನಿಕ  ಕಾಮಗಾರಿಯೇ ಘಟನೆಗೆ ಕಾರಣವೆಂದು ಸಾರ್ವಜನಿಕರು ದೂರುತಿದ್ದಾರೆ.

Advertisement

ಕೊಲ್ಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next