Advertisement

ರಸ್ತೆ ಅಪಘಾತ: ಬಾಲಕಿ ದುರ್ಮರಣ

12:48 AM May 01, 2019 | Team Udayavani |

ಬೆಂಗಳೂರು: ಅಣ್ಣನ ಹುಟ್ಟುಹಬ್ಬಕ್ಕೆ ಉಡುಗೊರೆ ಖರೀದಿಸಿ ಮನೆಗೆ ವಾಪಸ್‌ ಬರುತ್ತಿದ್ದ ಎಂಟು ವರ್ಷದ ಬಾಲಕಿಯ ಮೇಲೆ ಟ್ಯಾಂಕರ್‌ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಾಣಸವಾಡಿ ಸಂಚಾರ ಠಾಣಾ ವ್ಯಾಪ್ತಿಯ ಲಿಂಗಾರಾಜುಪುರ ಆಯಿಲ್‌ ಮಿಲ್‌ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

Advertisement

ಶಕ್ತಿವೇಲು ಎಂಬುವರ ಪುತ್ರಿ ಜನನಿ (8) ಮೃತ ಬಾಲಕಿ. ಕೃತ್ಯ ಎಸಗಿದ ಟ್ಯಾಂಕರ್‌ ಚಾಲಕ ಪ್ರದೀಪ್‌ನನ್ನು ಬಂಧಿಸಲಾಗಿದೆ ಎಂದು ಬಾಣಸವಾಡಿ ಸಂಚಾರ ಪೊಲೀಸರು ಹೇಳಿದರು. ಲಿಂಗರಾಜುಪುರದ ಆಯಿಲ್‌ ಮಿಲ್‌ ರಸ್ತೆಯ ಜಾನಕಿರಾಮ ಲೇಔಟ್‌ನಲ್ಲಿ ವಾಸವಾಗಿರುವ ಶಕ್ತಿವೇಲು ಅವರಿಗೆ ಇಬ್ಬರು ಮಕ್ಕಳು.

ಈ ಪೈಕಿ ಮಂಗಳವಾರ ಹಿರಿಯ ಪುತ್ರ ತನುಷ್‌ ಜನ್ಮದಿನವಿತ್ತು. ಈ ಹಿನ್ನೆಲೆಯಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಜನನಿ ಬೆಳಗ್ಗೆ 10 ಗಂಟೆ ಸುಮಾರಿಗೆ ಸಹೋದರನ ಹುಟ್ಟಹಬ್ಬಕ್ಕೆ ಉಡುಗೊರೆ ತರಲು ಅಂಗಡಿ ಹೋಗಿ ವಾಪಸ್‌ ಬರುತ್ತಿದ್ದಾಗ, ವೇಗವಾಗಿ ಬಂದ ಟಿಪ್ಪರ್‌ ಹಿಂದಿನಿಂದ ಜನನಿಗೆ ಡಿಕ್ಕಿ ಹೊಡೆದಿದೆ.

ಕೆಳಗೆ ಬಿದ್ದ ಆಕೆ ಮೇಲೆ ಟಿಪ್ಪರ್‌ನ ಹಿಂಭಾಗದ ಚಕ್ರಗಳು ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ವಿಷಯ ತಿಳಿದು ಸ್ಥಲೀಸರು ಪ್ರಕರಣ ಳಕ್ಕೆ ಧಾವಿಸಿದ ಪೊದಾಖಲಿಸಿಕೊಂಡು ಟಿಪ್ಪರ್‌ ಚಾಲಕನನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ. ಪ್ರಕರಣ ಬಾಣಸವಾಡಿ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next