Advertisement

ದೀಪಾ ಜಯಕುಮಾರ್‌, ನಟ ವಿಶಾಲ್‌ ನಾಮಪತ್ರ ತಿರಸ್ಕೃತ

07:39 PM Dec 05, 2017 | Team Udayavani |

ಹೊಸದಿಲ್ಲಿ : ಚೆನ್ನೈನ ಡಾ. ರಾಧಾಕೃಷ್ಣನ್‌ ನಗರ (ಆರ್‌ ಕೆ ನಗರ) ಉಪ ಚುನಾವಣೆಗೆ ಇಂದು ಮಂಗಳವಾರ ಹೊಸ ತಿರುವು ದೊರಕಿದೆ. 

Advertisement

ತಮಿಳು ನಾಡು ಮಾಜಿ ಮುಖ್ಯಮಂತ್ರಿ ದಿ| ಜೆ ಜಯಲಲಿತಾ ಅವರ ಪರಿತ್ಯಕ್ತ ಸೋದರ ಸಂಬಂಧಿ ದೀಪಾ ಜಯಕುಮಾರ್‌ ಮತ್ತು ನಟ ವಿಶಾಲ್‌ ಅವರ ನಾಮಪತ್ರಗಳನ್ನು ನಿರ್ವಚನಾಧಿಕಾರಿ ತಿರಸ್ಕರಿಸಿದ್ದಾರೆ. 

ಇದರಿಂದಾಗಿ ಇವರೀರ್ವರೂ ಈಗಿನ್ನು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲವಾಗಿದೆ ಎಂದು ಎಎನ್‌ಐ ವರದಿ ಮಾಡಿದೆ. ದೀಪಾ ಅವರು ಕಳೆದ ಮೇ ತಿಂಗಳಲ್ಲಿ ಸಲ್ಲಿಸಿದ್ದ ನಾಮಪತ್ರ ಸ್ವೀಕಾರವಾಗಿತ್ತು; ಆದರೆ ಅಭೂತಪೂರ್ವ ಪ್ರಮಾಣದಲ್ಲಿ  ಓಟಿಗಾಗಿ ನೋಟುಗಳು ಹರಿದಾಡಿದ ಚುನಾವಣೆ ರದ್ದಾಗಿತ್ತು. 

ಪಕ್ಷೇತರ ಅಭ್ಯರ್ಥಿಯಾಗಿ ತಾನು ಸ್ಪರ್ಧಿಸುವೆಂದು ಈ ಹಿಂದೆ ಹೇಳಿದ್ದ ನಟ ವಿಶಾಲ್‌ ಅವರ ನಾಮಪತ್ರವೂ ಇಂದು ತಿರಸ್ಕೃತವಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next