Advertisement

Rishikesh: ನೀರಿನ ಬುಗ್ಗೆಯ ಆತಂಕ

11:43 PM Aug 22, 2023 | Team Udayavani |

ಋಷಿಕೇಶ್‌: ವರುಣ ಪ್ರಕೋಪಕ್ಕೆ ತುತ್ತಾಗಿರುವ ಉತ್ತರಾಖಂಡದ ಋಷಿಕೇಶದ ಗಂಗಾನಗರ ಎಂಬಲ್ಲಿ ಇರುವ ಕೆಲವು ಮನೆಗಳ ನೆಲದ ಅಡಿಯಿಂದ ನೀರಿನ ಬುಗ್ಗೆಗಳು ಏಳಲಾರಂಭಿಸಿವೆ.

Advertisement

ಇದರಿಂದಾಗಿ ಸ್ಥಳೀಯರು ಭೀತಿಗೆ ಒಳಗಾಗಿದ್ದಾರೆ. ಹಲವು ದಿನಗಳಿಂದ ಈ ಪ್ರದೇಶ ಸೇರಿದಂತೆ ರಾಜ್ಯಾದ್ಯಂತ ಧಾರಾಕಾರ ಮಳೆಯಾಗಿದೆ. ಅದರಿಂದಾಗಿ ಗಂಗಾನದಿಯಲ್ಲಿ ಪ್ರವಾಹವೂ ಹೆಚ್ಚಾಗಿದೆ. ಅದರಿಂದಾಗಿ ಈ ಸಮಸ್ಯೆ ಉದ್ಭವಿಸಿದೆ. ಇದರ ಜತೆಗೆ ಸ್ಥಳೀಯವಾಗಿ ಒಳಚರಂಡಿ ವ್ಯವಸ್ಥೆಯೂ ಕೆಟ್ಟು ಹೋಗಿರುವುದರಿಂದ ನೀರಿನ ಬುಗ್ಗೆಗಳು ಏಳಲಾರಂಭಿಸಿವೆ ಎಂದು ಸ್ಥಳೀಯರು ದೂರಿದ್ದಾರೆ. ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಹಾನಗರ ಪಾಲಿಕೆಯ ಆಯುಕ್ತ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next