Advertisement

ಎಲ್ಲರೂ ಧೋನಿಯಂತಾಗಲು ಸಾಧ್ಯವಿಲ್ಲ. ಆತ ಶ್ರೇಷ್ಠ ಆಟಗಾರ: ಕಪಿಲ್ ದೇವ್

09:55 AM Apr 05, 2019 | Team Udayavani |

ಮುಂಬೈ: ಮಹೇಂದ್ರ ಸಿಂಗ್ ಧೋನಿ ಓರ್ವ ಶ್ರೇಷ್ಠ ಆಟಗಾರ. ಆತನ ಜೊತೆಗೆ ಯಾರನ್ನೂ ಹೋಲಿಕೆ ಮಾಡುವುದು ಸರಿಯಲ್ಲ. ಧೋನಿಯ ಶ್ರೇಷ್ಠತೆಯನ್ನೇರುವುದು ಯಾರಿಗೂ ಸಾದ್ಯವಿಲ್ಲ ಎಂದು ಭಾರತದ ಮೊದಲ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅಭಿಪ್ರಾಯ ಪಟ್ಟಿದ್ದಾರೆ.

Advertisement

ಯುವ ವಿಕೆಟ್ ಕೀಪರ್ ರಿಷಭ್ ಪಂತ್ ರನ್ನು ಧೋನಿಯ ಜೊತೆ ಹೋಲಿಸುತ್ತಿರುವ ಬೆಳವಣಿಗೆಯ ಹಿನ್ನಲೆಯಲ್ಲಿ ಕಪಿಲ್ ದೇವ್ ಈ ಅಭಿಪ್ರಾಯ ವ್ಯಕ್ತ ಪಡಿಸಿದರು.

ರಿಷಭ್ ಪಂತ್ ನಿಜವಾಗಿಯೂ ಪ್ರತಿಭಾನ್ವಿತ ಆಟಗಾರ. ಆತನನ್ನು ಮಹೇಂದ್ರ ಸಿಂಗ್ ಧೋನಿಯ ಜೊತೆಗೆ ತುಲನೆ ಮಾಡುವುದು ಸರಿಯಲ್ಲ. ಹೀಗೆ ಹೋಲಿಕೆ ಮಾಡುವುದರಿಂದ ಪಂತ್ ಮೇಲೆ ಒತ್ತಡ ಬೀಳುತ್ತದೆ. ಪಂತ್ ಕೂಡಾ ಒಂದು ದಿನ ದೊಡ್ಡ ಮಟ್ಟದ ಆಟಗಾರನಾಗಿ ರೂಪುಗೊಳ್ಳುತ್ತಾನೆ. ಅವನ ಸಮಯ ಖಂಡಿತ ಬರುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next