Advertisement

Kantara: ನೀನು ಮುನ್ನಗ್ಗು..ʼಕಾಂತಾರʼ ಸಿನಿಮಾದ ಕುರಿತು ರಿಷಬ್‌ ಶೆಟ್ಟಿಗೆ ಅಭಯ ನೀಡಿದ ದೈವ

12:29 PM Jan 06, 2024 | Team Udayavani |

ಮಂಗಳೂರು: ರಿಷಬ್‌ ಶೆಟ್ಟಿ ಅವರ ʼಕಾಂತಾರ -1ʼ ಸಿನಿಮಾದ ಮುಹೂರ್ತ ಇತ್ತೀಚೆಗೆ ಕುಂದಾಪುರದ ಆನೆಗುಡ್ಡೆಯಲ್ಲಿ ನೆರವೇರಿದೆ. ಆ ಬಳಿಕ ಸಿನಿಮಾದ ವಿಚಾರದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

Advertisement

ʼಕಾಂತಾರ ಅಧ್ಯಾಯ -1ʼ ರಲ್ಲಿ ನಟಿಸಲು ಕಲಾವಿದರು ಬೇಕಾಗಿದ್ದಾರೆ ಎನ್ನುವ ಪೋಸ್ಟರ್‌ ನ್ನು ಹೊಂಬಾಳೆ ಫಿಲ್ಮ್ಸ್‌ ಇತ್ತೀಚೆಗೆ ಹೊರಬಿಟ್ಟಿತ್ತು. ಸಿನಿಮಾದಲ್ಲಿ ನಟಿಸಲು ಸಾವಿರಾರು ಮಂದಿ ಅಡಿಷನ್‌ ನೀಡಿದ್ದಾರೆ. ಚಿತ್ರೀಕರಣ ಆರಂಭಿಸುವ ತಯಾರಿಯಲ್ಲಿ ರಿಷಬ್‌ ಮತ್ತು ಅವರ ತಂಡ ಸಿದ್ದತೆಯನ್ನು ನಡೆಸುತ್ತಿದೆ.

ತುಳುನಾಡಿನ ದೈವ ಹಾಗೂ ನೆಲೆಯ ಕಥೆಯನ್ನು ʼಕಾಂತಾರʼ ಸಿನಿಮಾ ಹೇಳಿತ್ತು. ಪ್ರೀಕ್ವೆಲ್‌ ನಲ್ಲೂ ತುಳುನಾಡಿನ ಪಂಜುರ್ಲಿ ದೈವದ ಕಥೆ ಇರಲಿದೆ ಎನ್ನಲಾಗಿದೆ. ನಟ – ನಿರ್ದೇಶಕ ರಿಷಬ್‌ ʼಕಾಂತಾರʼ ಪ್ರೀಕ್ವೆಲ್‌ ಶುರು ಮಾಡುವ ಮುನ್ನ ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಎಲ್ಲೂ ಕೂಡ ತುಳುನಾಡಿನ ಆಚಾರ – ವಿಚಾರ ಹಾಗೂ ದೈವಗಳಿಗೆ ಅಪಮಾನವಾಗುವ ರೀತಿಯಲ್ಲಿ ಯಾವ ಸನ್ನಿವೇಶಗಳು ಇರಬಾರದೆನ್ನುವ ನಿಟ್ಟಿನಲ್ಲಿ ಎಚ್ಚರಿಕೆಯನ್ನು ಚಿತ್ರತಂಡ ವಹಿಸುತ್ತಿದೆ.

ಮಂಗಳೂರಿನ ವಜ್ರದೇಹಿ ಮಠದ ಸ್ವಾಮೀಜಿ ವಜ್ರದೇಹಿ ಶ್ರೀ ಅವರು, ರಿಷಬ್‌ ಅವರನ್ನು ದೈವ ಕೋಲಕ್ಕೆ ಆಹ್ವಾನಿಸಿದ ನಿಟ್ಟಿನಲ್ಲಿ ದೈವ ಕೋಲಕ್ಕೆ ರಿಷಬ್‌ ಶೆಟ್ಟಿ ಭೇಟಿ ಕೊಟ್ಟಿದ್ದಾರೆ. ಈ ವೇಳೆ ʼಕಾಂತಾರʼ ಸಿನಿಮಾದ ಬಗ್ಗೆ ಕೇಳಿದ್ದಾರೆ. ಇದಕ್ಕೆ ದೈವ ನೀನು ಮುನ್ನುಗ್ಗು, ನಿನ್ನ ಬೆನ್ನ ಹಿಂದೆ ನಾನಿದ್ದೇನೆ ಎಂದು ಅಭಯವನ್ನು ನೀಡಿದೆ.

ʼಕಾಂತಾರʼ ಸಿನಿಮಾದ ಬಳಿಕ ಎಲ್ಲೆಡೆ ದೈವಗಳ ವೇಷಭೂಷಣವನ್ನು ಹಾಕಿ, ಅಪಮಾನವಾಗುವ ರೀತಿಯಲ್ಲಿ ಕೆಲವರು ಆಡಂಬರವಾಗಿಸಿದ್ದರು. ಆ ನಿಟ್ಟಿನಲ್ಲಿ ʼಕಾಂತಾರʼ ಪ್ರೀಕ್ವೆಲ್‌ ನ್ನು ತೆರೆಮೇಲೆ ತರುವಾಗ ಬಹಳ ಎಚ್ಚರಿಕೆ ಹೆಜ್ಜೆಯನ್ನಿಡುತ್ತಾ ರಿಷಬ್‌ ಸಾಗುತ್ತಿದ್ದಾರೆ.

Advertisement

ಸದ್ಯ ಸಿನಿಮಾದ ಚಿತ್ರೀಕರಣ ಆರಂಭಗೊಳ್ಳಬೇಕಿದ್ದು, ಕಲಾವಿದರ ಪರಿಚಯ ಇನ್ನಷ್ಟೇ ಆಗಬೇಕಿದೆ.

 

Advertisement

Udayavani is now on Telegram. Click here to join our channel and stay updated with the latest news.

Next