Advertisement

ಪಡಿತರ ಅಕ್ಕಿ-ಬೇಳೆ ಪರಿಶೀಲನೆ

06:24 PM Apr 30, 2020 | Suhan S |

ಹಾವೇರಿ: ಪಡಿತರ ಅಕ್ಕಿ ಹಾಗೂ ತೊಗರಿ ಬೇಳೆ ದಾಸ್ತಾನು ಮಾಡಿರುವ ನಗರದ ಗೋದಾಮುಗಳಿಗೆ ಬುಧವಾರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಖಾತೆ ಸಚಿವ ಕೆ.ಗೋಪಾಲಯ್ಯ ಭೇಟಿ ನೀಡಿ ಪರಿಶೀಲಿಸಿದರು.

Advertisement

ಕೋವಿಡ್ 19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪಡಿತರದಾರರಿಗೆ ಆಹಾರ ಸಾಮಗ್ರಿಗಳ ವಿತರಣೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಅಕ್ಕಿ ಮತ್ತು ತೊಗರಿಬೇಳೆ ಗುಣಮಟ್ಟ ಕುರಿತಂತೆ ಖುದ್ದಾಗಿ ಪರಿಶೀಲಿಸಲು ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಆಹಾರ ಇಲಾಖೆ ಪಡಿತರ ದಾಸ್ತಾನಿಗಾಗಿ ಪ್ರತ್ಯೇಕ ಗೋದಾಮು ನಿರ್ಮಾಣದ ಅವಶ್ಯಕತೆ ಇದ್ದು, ಕನಿಷ್ಠ ಐದಾರು ಎಕರೆ ಭೂಮಿಯನ್ನು ಗುರುತಿಸಿ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಶಾಸಕ ನೆಹರು ಓಲೇಕಾರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next