Advertisement

Detailed: ಜೂನ್ 8ರಂದು ಸುಶಾಂತ್ ಮನೆ ತೊರೆದ ದಿನ ರಿಯಾ, ಮಹೇಶ್ ಭಟ್ ನಡುವೆ ವಾಟ್ಸಪ್ ಚಾಟ್

09:51 AM Aug 21, 2020 | Nagendra Trasi |

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ ತಿಂಗಳಿನಲ್ಲಿ ಸಾವನ್ನಪ್ಪಿದ್ದ ಬಳಿಕ ಪ್ರತಿಯೊಂದು ಹಂತದಲ್ಲಿಯೂ ನಟಿ ರಿಯಾ ಚಕ್ರವರ್ತಿ ಹೆಚ್ಚು ಸುದ್ದಿಗೆ ಗ್ರಾಸವಾಗಿದ್ದು, ಇದೀಗ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ. ಮತ್ತೊಂದೆಡೆ ಇಂಡಿಯಾ ಟುಡೆ ನಟಿ ರಿಯಾ ಮತ್ತು ಬಾಲಿವುಡ್ ಖ್ಯಾತ ನಿರ್ದೇಶಕ ಮಹೇಶ್ ಭಟ್ ನಡುವೆ ನಡೆದ ವಾಟ್ಸಪ್ ಚಾಟ್ ಅನ್ನು ಬಹಿರಂಗಗೊಳಿಸಿದೆ.

Advertisement

ಈಗ ರಿಯಾ ಚಕ್ರವರ್ತಿ ಮತ್ತು ಮಹೇಶ್ ಭಟ್ ನಡುವೆ ಜೂನ್ 8ರಂದು ನಡೆದ ವಾಟ್ಸಪ್ ಸಂಭಾಷಣೆ ವೈರಲ್ ಆಗಿದೆ. ಈ ಚಾಟ್ ಗಳನ್ನು ಗಮನಿಸಿದರೆ ನಿರ್ದೇಶಕ ಮಹೇಶ್ ಭಟ್ ಬಳಿ, ತಾನು ಬಾಯ್ ಫ್ರೆಂಡ್ (ಸುಶಾಂತ್) ಅನ್ನು ತುಂಬಾ ಭಾರವಾದ, ನೋವಿನಿಂದ ಬಿಟ್ಟುಹೋಗುತ್ತಿದ್ದೇನೆ ಎಂಬುದನ್ನು ರಿಯಾ ತಿಳಿಸಿದ್ದಳು.

“ಆಯಿಷಾ ತುಂಬಾ ಭಾರವಾದ ಹೃದಯದಿಂದ ಹೊರಟಿದ್ದಾಳೆ…ಸರ್..ನನಗೆ ತುಸು ನಿರಾಳತೆ ತಂದಿದೆ. “ನಿಮ್ಮ ಕೊನೆಯ ಕರೆ ನನಗೆ ಎಚ್ಚರಿಕೆಯ ಕರೆಯಾಗಿತ್ತು…ನೀವು ನನ್ನ ಕಣ್ಣು ತೆರೆಸಿದ ದೇವರು. ಇಂದು ಹಾಗೂ ಎಂದೆಂದಿಗೂ”..ಎಂಬ ಸಂಭಾಷಣೆ ರಿಯಾ ಮಹೇಶ್ ಭಟ್ ಗೆ ವಾಟ್ಸಪ್ ಸಂದೇಶ ಕಳುಹಿಸಿದ್ದಳು.

ಮಹೇಶ್ ಭಟ್ ನಿರ್ದೇಶನದ “ಜಿಲೇಬಿ” ಸಿನಿಮಾದಲ್ಲಿ ರಿಯಾ ಚಕ್ರವರ್ತಿ ನಟಿಸಿದ್ದು, ಅದರಲ್ಲಿನ ರಿಯಾ ಪಾತ್ರದ ಹೆಸರು “ಆಯಿಷಾ”. ಹೀಗೆ ರಿಯಾ ಸಂದೇಶದ ಬಳಿಕ ಮಹೇಶ್ ಭಟ್ ಅವರು ಪ್ರತಿಕ್ರಿಯಿಸಿದ ಸಂದೇಶದಲ್ಲಿ, ಯಾವುದೇ ಕಾರಣಕ್ಕೂ ಹಿಂದೆ ನೋಡಬೇಡ, ಅನಿವಾರ್ಯವಾಗಿರುವುದನ್ನು ಸಾಧಿಸಬೇಕಾಗುತ್ತದೆ. ನಿನ್ನ ತಂದೆಗೆ ನನ್ನ ಪ್ರೀತಿಯನ್ನು ತಿಳಿಸು. ಅವರು ಸಂತೋಷವಾಗಿರಲಿ”.

Advertisement

ರಿಯಾ ಮತ್ತು ಮಹೇಶ್ ಭಟ್ ನಡುವಿನ ವಾಟ್ಸಪ್ ಚಾಟ್ ನಿಂದ ತಿಳಿದು ಬರುವ ಸತ್ಯವೆನೆಂದರೆ, ಸುಶಾಂತ್ ಜತೆಗಿನ ರಿಯಾ ಸಂಬಂಧದ ಬಗ್ಗೆ ಆಕೆಯ ತಂದೆಗೆ ಇಷ್ಟವಿರಲಿಲ್ಲ. ಇದಕ್ಕೆ ಮಹೇಶ್ ಭಟ್ ಸುಶಾಂತ್ ನನ್ನು ತೊರೆಯುವ ಬಗ್ಗೆ ಸಲಹೆ ನೀಡಿದ್ದರು ಎಂಬುದು ಸೂಕ್ಷ್ಮವಾಗಿ ಗಮನಿಸಬಹುದಾಗಿದೆ ಎಂದು ವರದಿ ತಿಳಿಸಿದೆ.

ರಿಯಾ ಚಕ್ರವರ್ತಿಗೆ ಮಹೇಶ್ ಭಟ್ ಅವರು ನೀಡಿದ ಸಲಹೆಯ ಚಾಟಿಂಗ್ ಹಲವಾರು ವಿಷಯಗಳನ್ನು ಬಹಿರಂಗಗೊಳಿಸುವಂತಿದೆ. ಮತ್ತೊಂದು ಚಾಟ್ ನಲ್ಲಿ ರಿಯಾ, ನೀವು ಮೊಬೈಲ್ ನಲ್ಲಿ ಅಂದು ನನ್ನ ತಂದೆಯ ಬಗ್ಗೆ ಹೇಳಿದ ಮೇಲೆ ನಾನು ಮತ್ತಷ್ಟು ಗಟ್ಟಿಗಿತ್ತಿಯಾದೆ. ತಂದೆ ನಿಮಗೂ ಅಭಾರಿ ಎಂದು ತಿಳಿಸಿದ್ದಾರೆ. ನೀವು ನಮ್ಮ ಪಾಲಿಗೆ ಯಾವತ್ತೂ ವಿಶೇಷ ವ್ಯಕ್ತಿ ಧನ್ಯವಾದ” ಎಂದು ತಿಳಿಸಿದ್ದಳು.

ಮಹೇಶ್ ಭಟ್ ಅದಕ್ಕೆ, ನೀನು ನನ್ನ ಮಗಳಿದ್ದ ಹಾಗೆ, ನನಗೂ ಬೆಳಕು ಸಿಕ್ಕಂತಾಗಿದೆ. ಬಳಿಕ ರಿಯಾ ಪ್ರತಿಕ್ರಿಯಿಸಿ, ಆಹಾಹಾ…ಶಬ್ದಗಳೇ ಹೊರಡುತ್ತಿಲ್ಲ ಸರ್…ನಿಮ್ಮ ಬಗ್ಗೆ ಭಾವನಾತ್ಮಕ ಭಾವನೆ ನಿಮ್ಮ ಮೇಲಿದೆ” ಎಂದು ಹೇಳಿದ್ದಳು.

ಇದೀಗ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ರಿಯಾ ವಿರುದ್ಧ ಹಲವಾರು ಕಾಯ್ದೆಯಡಿ ದೂರು ದಾಖಲಾಗಿದೆ. ಅಲ್ಲದೇ ಜೂನ್ 8ರಂದು ರಿಯಾ ಮತ್ತು ಸುಶಾಂತ್ ನಡುವೆ ನಿಜಕ್ಕೂ ಏನು ನಡೆಯಿತು ಎಂಬ ಬಗ್ಗೆ ರಿಯಾ ಹೆಚ್ಚಿನ ಮಾಹಿತಿ ನೀಡಿದರೆ ಇನ್ನಷ್ಟು ಸತ್ಯ ಹೊರಬೀಳಬಹುದು ಎಂದು ವರದಿ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next