Advertisement

ಹಳ್ಳಿ –ಪೇಟೆ ವಾಸದ ಮಂಥನ ಡಾ|ಕಾರಂತರ “ಚಿಗುರಿದ ಕನಸು’

11:52 PM Nov 20, 2020 | mahesh |

ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.

Advertisement

ಹುಟ್ಟಿ ಬೆಳೆದ ನೆಲವನ್ನು ಬಿಟ್ಟು ಪೇಟೆಯ ಮೋಹಕ ಬಲೆಯೊಳಗೆ ಸಿಲುಕಿ ತಮ್ಮ ಮೂಲ ನೆಲೆ, ಅಲ್ಲಿನ ಪರಿಸರ, ಬಂಧು ಬಾಂಧವ್ಯದ ಬಗ್ಗೆ ಕಿಂಚಿತ್ತೂ ಚಿಂತಿಸದೆ ಆಧುನಿಕ ಬದುಕಿನ ದಾಸರಾಗಿರುವವರು ಡಾ| ಶಿವರಾಮ ಕಾರಂತರ “ಚಿಗುರಿದ ಕನಸು’ ಕಾದಂಬರಿಯನ್ನು ಓದಿದರೆ ಅದ್ಭುತ ಬದಲಾವಣೆ ಸಾಧ್ಯ.

ಕಾದಂಬರಿಯ ನಾಯಕ ಶಂಕರ ಹುಟ್ಟಿ ಬೆಳೆದದ್ದು ಮುಂಬಯಿಯಲ್ಲಿ. ಆದರೂ ತನ್ನ ಮೂಲ ಸ್ಥಳ ಮುಂಬಯಿ ಅಲ್ಲ ಎಂದು ಅವನ ಮನಸ್ಸು ಹೇಳುತ್ತಿ ರುತ್ತದೆ. ತಂದೆ ಯೊಂದಿಗಿನ ಒಂದು ಸಣ್ಣ ಮಾತುಕತೆ ಸಂದರ್ಭದಲ್ಲಿ, “ನಿಮ್ಮ ತಾತ, ಅಂದರೆ ನನ್ನ ತಂದೆ ಮೂಲತಃ ಇಲ್ಲಿಯವರಲ್ಲ. ಅದ್ಯಾವುದೋ ಬೆಳ್ತಂಗಡಿಯ ಪಕ್ಕದ ಬಂಗಾಡಿ ಎಂಬ ಹಳ್ಳಿಯವರು’ ಎಂದು ಹೇಳಿದ ಬಳಿಕ ಶಂಕರನಲ್ಲಿ ದೊಡ್ಡ ಬದಲಾವಣೆ ಕಂಡು ಬರುತ್ತದೆ.

ಶಂಕರನು ಮುಂಬಯಿಯಲ್ಲಿ ಪ್ರೀತಿಸಿದ್ದ ಹುಡುಗಿಯನ್ನೂ ಅಗಲಿ ಸೀದಾ ಬಂಗಾಡಿ ಯೆಂಬ ಊರನ್ನು ಹುಡುಕುತ್ತಾ ಹೋಗಿ ಅಲ್ಲಿಯೇ ನೆಲೆ ನಿಲ್ಲುತ್ತಾನೆ. ಅಲ್ಲಿ ಎದು ರಾಗುವ ಶಾನುಭೋಗರ ಉಪದ್ರದ ಮಧ್ಯೆಯೂ ಪಾಳು ಬಿದ್ದ ಮನೆಯನ್ನು ಸರಿಪಡಿಸಿ, ಗದ್ದೆ ಉಳುಮೆ ಮಾಡಿ ಬೆಳೆ ಬೆಳೆದು, ಅಬ್ಬಿ ಫಾಲ್ಸ್‌ಗೆ ಮೋಟಾರ್‌ ಇರಿಸಿ ವಿದ್ಯುತ್‌ ಉತ್ಪಾದಿಸುತ್ತಿದ್ದ. ತಾತನ ಸಹೋದರಿಯ (ಅಜ್ಜಿಯ) ಕೊನೆಯ ಕ್ಷಣಗಳಲ್ಲಿ ಅವಳ ಆಸೆಯನ್ನು ಪೂರೈಸಿ ಅವಳನ್ನು ಆರೈಕೆ ಮಾಡುತ್ತಾನೆ. ಬಂಗಾಡಿಯು ಮತ್ತೆ ಹಸುರಿನಿಂದ ಕಂಗೊಳಿಸುವಂತೆ ಮಾಡುತ್ತಾನೆ.

ಶಂಕರನಿಗೆ ಗದ್ದೆಯ ಮಣ್ಣು, ನೀರಾವರಿ, ಮಲೆನಾಡಿನ ಬಿರುಸಾದ ಮಳೆ… ಮುಂತಾ ದವುಗಳ ಬಗ್ಗೆ ಯಾವುದೇ ಮಾಹಿತಿ ಇರದಿದ್ದರೂ ತಾತನ ಜಾಗದಲ್ಲಿ ನೆಲೆನಿಂತು ಅಜ್ಜನನ್ನು ಮರು ಸೃಷ್ಟಿಸುವ ರೋಚಕತೆ ಯನ್ನು ಕಾರಂತರು ವರ್ಣಿಸಿದ್ದಾರೆ.

Advertisement

ಈ ಕೃತಿಯ ಬರವಣಿಗೆ ಶೈಲಿ ಓದುಗನನ್ನು ಹಿಡಿದಿಡುತ್ತದೆ. ಕಾದಂಬರಿಯನ್ನು ಓದುತ್ತಾ ಸಾಗುವಾಗ ಧಾರಾಕಾರ ಮಳೆಯ ಮಧ್ಯೆ ನಿಂತಿದ್ದೇವೆ, ಗದ್ದೆಯನ್ನು ಉಳುತ್ತಿದ್ದೇವೆ, ಘಟ್ಟದ ತುದಿಯಲ್ಲಿ ನಿಂತು ಮಾತನಾಡು ತ್ತಿದ್ದೇವೆ ಇತ್ಯಾದಿ ಭಾವನೆ ಓದುಗನಲ್ಲಿ ಮೂಡುತ್ತದೆ.

ಕಾರಂತರು ಬಳಸಿದ ಭಾಷಾ ಶೈಲಿ, ಕಾದಂಬರಿಯಲ್ಲಿ ಬರುವ ತಿರುವುಗಳು, ಪ್ರೇಮ ವಿರಹದ ಕ್ಷಣ, ತಂದೆ ಮಗನ ಸಂಬಂಧ ಎಲ್ಲವೂ ಅದ್ಭುತ ವಾಗಿವೆ. 2003ರಲ್ಲಿ ಈ ಕಾದಂಬರಿಯು ಶಿವರಾಜ ಕುಮಾರ್‌ ನಟನೆ ಯಲ್ಲಿ ಟಿ.ಎಸ್‌. ನಾಗಾ ಭರಣ ನಿರ್ದೇಶನದಲ್ಲಿ ಸಿನೆಮಾ ಆಗಿ ರಾಜ್ಯ ಮಟ್ಟದ ಪ್ರಶಸ್ತಿ ಗಳನ್ನು ಕೂಡ ಗೆದ್ದಿತ್ತು.

ಕೊರೊನಾ ಸಂದರ್ಭದಲ್ಲಿ ಒಂದು ದೊಡ್ಡ ವರ್ಗ ಕೃಷಿಯತ್ತ ವಾಲಿದ್ದು, ಅಂಥವರು ಈ ಕೃತಿಯನ್ನು ಓದಿದರೆ ಒಳಿತು. ಪೇಟೆಯ ಖುಷಿ ಕ್ಷಣಿಕವಾದುದು ಮತ್ತು ಹಳ್ಳಿಯ ಬಹುಶ್ರೀಮಂತಿಕೆಯು ನಮಗೆ ಎಲ್ಲ ರೀತಿಯಲ್ಲೂ ಸಂತೋಷವನ್ನು ಕೊಡುತ್ತದೆೆ. ಜತೆಗೆ ಕೃಷಿಯ ಮಹತ್ವದ ಬಗ್ಗೆಯೂ, ಪರಿಸರದ ಬಗ್ಗೆಯೂ ಈ ಕೃತಿಯು ನಮಗೆ ಸಾಕಷ್ಟು ಮಾಹಿತಿ ನೀಡುತ್ತದೆ.

ಆಧುನಿಕತೆಯ ಭರಾಟೆಯಲ್ಲಿ ನಮ್ಮ ಪೂರ್ವಜರ ನೆಲೆಯನ್ನು ದೂರ ಮಾಡಿ, ಕೃಷಿಯನ್ನು ಮರೆತರೆ ಏನೇನು ಸಂಕಷ್ಟಗಳು ಎದುರಾಗಲಿವೆ ಎಂಬ ಬಗ್ಗೆಯೂ ಕೃತಿ ನಮ್ಮ ಕಣ್ಣು ತೆರೆಸುತ್ತದೆ. ಕೃತಿಯು ಹಳ್ಳಿ ಮತ್ತು ಪೇಟೆವಾಸದ ನಡುವಿನ ವ್ಯತ್ಯಾಸ, ಪ್ರಕೃತಿಯ ಮಡಿಲಿನ ಖುಷಿಯನ್ನು ಸುಂದರ ಶಬ್ದಗಳಲ್ಲಿ ನಮಗೆ ಕಟ್ಟಿ ಕೊಡುವಲ್ಲಿ ಸಫ‌ಲವಾಗಿದೆ. ಮಳೆಯ ಜತೆ ನಮ್ಮನ್ನು ಓದಿಸುತ್ತಾ ಹೋಗುವ ಈ ಕಾದಂಬರಿ ಚೆನ್ನಾಗಿದೆ.

ಬಸನಗೌಡ ಪಾಟೀಲ್‌, ಯರಗುಪ್ಪಿ

Advertisement

Udayavani is now on Telegram. Click here to join our channel and stay updated with the latest news.

Next