Advertisement

ಬಿತ್ತನೆ ಬೀಜಕ್ಕೆ ತಕ್ಷಣ ಸಬ್ಸಿಡಿಘೋಷಿಸಲು ರೇವಣ್ಣ ಆಗ್ರಹ

06:01 PM Apr 28, 2020 | mahesh |

ಹಾಸನ: ನಿರ್ಮಾಣ ಸಾಮಗ್ರಿ ದರ ಏರಿಕೆ ನಿಯಂತ್ರಿಸಬೇಕು ಹಾಗೂ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಸರ್ಕಾರ ಸಹಾಯಧನ ಘೋಷಿಸಬೇಕು ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಒತ್ತಾಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ – ಜೂನ್‌ ತಿಂಗಳಿನಲ್ಲಿ ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆ ಆರಂಭವಾಗಲಿದೆ. ಮೇ ಮೊದಲ ವಾರದಿಂದಲೇ ಆಲೂಗಡ್ಡೆ ಬಿತ್ತನೆ ಬೀಜದ ಮಾರಾಟ ಆರಂಭವಾಗಲಿದ್ದು, ಬಿತ್ತನೆ ಬೀಜ ಮಾರಾಟದ ಸಂದರ್ಭ ದಲ್ಲಿಯೇ ಬಿತ್ತನೆ ಬೀಜ ಮತ್ತು ಔಷಧಿ ಖರೀದಿಗೆ ಸಹಾಯಧನ ನೀಡಬೇಕು ಎಂದು ಮನವಿ ಮಾಡಿದರು. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಆಲೂಗಡ್ಡೆ ಬಿತ್ತನೆಗೆ ಸಬ್ಸಿಡಿಯನ್ನು ಕೂಡಲೇ ಘೋಷಣೆ ಮಾಡಬೇಕು. ಈ ಸಂಬಂಧ ಜಿಲ್ಲಾಧಿಕಾರಿ ಯವರು ಕೂಡಲೇ ಜಿಲ್ಲೆಯ ಎಲ್ಲ ಶಾಸಕರು, ಎಪಿಎಂಸಿ ಅಧ್ಯಕ್ಷರ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.

ಸರ್ಕಾರ ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ನೀಡಿದೆ. ಆದರೆ ಸಿಮೆಂಟ್‌ ಮತ್ತು ಉಕ್ಕು ದುಬಾರಿಯಾಗಿದೆ. ವರ್ತಕರು ದುಪ್ಪಟ್ಟು ದರದಲ್ಲಿ ಸಿಮೆಂಟ್‌, ಉಕ್ಕು ಮಾರಾಟ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ವರ್ತಕರ ಗೋದಾಮುಗಳ ಮೇಲೆ ದಾಳಿ ನಡೆಸಿ ದಾಸ್ತಾನು ಮತ್ತು ಮಾರಾಟದ ಮೇಲೆ ನಿಗಾ ವಹಿಸಬೇಕು ಎಂದರು.  ಹಾಸನ ನಾಚನಹಳ್ಳಿ ನಿವಾಸಿ 108 ಆ್ಯಂಬುಲೆನ್ಸ್‌ ಚಾಲಕ ಕೃಷ್ಣಮೂರ್ತಿ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದ್ದು, ಆತನನ್ನು ಕೊರೊನಾ ವಾರಿಯರ್‌ ಎಂದು ಪರಿಗಣಿಸಿ 25 ಲಕ್ಷ ರೂ. ವಿಶೇಷ ಪರಿಹಾರ ನೀಡಬೇಕು ಹಾಗೂ  ಆತನ ಕುಟುಂಬದವರೊಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದೂ ಮನವಿ ಮಾಡಿದರು. ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್‌ ಉಪಸ್ಥಿತರಿದ್ದರು. ಇಲಾಖೆ ಉಪನಿರ್ದೇಶಕ ಮಂಜು ನಾಥ್‌ ವಿವಿಧ ಎಪಿಎಂಸಿ ಕಾರ್ಯ ದರ್ಶಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next