Advertisement

ಅಲ್ಪಸಂಖ್ಯಾಕರ ಮೇಲಣ ಪ್ರಕರಣ ವಾಪಸ್‌:ಸರಕಾರದಿಂದ ಯೂಟರ್ನ್ ; ಶೋಭಾ

06:45 AM Jan 29, 2018 | Team Udayavani |

ಬೆಂಗಳೂರು: ಅಲ್ಪಸಂಖ್ಯಾಕ ಸಮುದಾಯದವರ ವಿರುದ್ಧದ ಪ್ರಕರಣ ವಾಪಸ್‌ ಪಡೆಯುವ ಸುತ್ತೋಲೆ ಹೊರಡಿಸಿದ್ದ ಕಾಂಗ್ರೆಸ್‌ ಸರಕಾರ ಬಿಜೆಪಿ ಹೋರಾಟದ ಹಿನ್ನೆಲೆಯಲ್ಲಿ ಕಂಗಾಲಾಗಿ ಈ ವಿಷಮ ಪರಿಸ್ಥಿತಿಯಿಂದ ಪಾರಾಗಲು ಯತ್ನಿಸಿ ಯೂ ಟರ್ನ್ ಹೊಡೆಯುವ ಮೂಲಕ ಮುಖಭಂಗ ಅನುಭವಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.

Advertisement

ಈ ಮಧ್ಯೆ ಶನಿವಾರ ಸಂಜೆ ಹೊರಡಿಸಿದ ಸುತ್ತೋಲೆ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿರುವ ಅವರು ಹಿಂದಿನ ಸುತ್ತೋಲೆಯಲ್ಲಿ ನಮೂದಿಸಲಾದ ಅಮಾಯಕ ಮುಸ್ಲಿಂ ವಿರುದ್ಧದ ಪ್ರಕರಣಗಳನ್ನು ಎಂಬ ಶಬ್ದದ ಬದಲಿಗೆ ಎಲ್ಲಾ ಅಮಾಯಕರ ವಿರುದ್ಧದ ಪ್ರಕರಣಗಳನ್ನು ಎಂದು ನಮೂದಿಸಲಾಗಿದೆ. ಅಮಾಯಕರು ಎಂಬ ಶಬ್ದಕ್ಕೆ ಸರಕಾರ ನೀಡುವ ವಿವರಣೆಯೇನು? ವಾಸ್ತವವಾಗಿ ಅಪರಾಧಿಯೇ ಅಥವಾ ನಿರಪರಾಧಿಯೇ ಎಂದು ತೀರ್ಮಾನಿಸಬೇಕಾಗಿರುವುದು ನ್ಯಾಯಾಲಯ. ನ್ಯಾಯಾಲಯದ ಈ ಅಧಿಕಾರ ವ್ಯಾಪ್ತಿಯನ್ನು ಆಕ್ರಮಿಸಿ ಸರಕಾರ ಯಾರನ್ನಾದರೂ ನಿರಪರಾಧಿ ಅಥವಾ ಅಮಾಯಕ ಎಂದು ನಿರ್ಧರಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next