Advertisement

Retirement ಬಳಿಕ ಎಸ್‌ಪಿ ಪದೋನ್ನತಿಗೆ ಪೂರ್ವಾನ್ವಯ ಆದೇಶ

12:37 AM Jul 05, 2024 | Team Udayavani |

ಮಂಗಳೂರು: ಪೊಲೀಸ್‌ ಉಪ ಅಧೀಕ್ಷಕರಾಗಿ, ಇಂಟಲಿಜೆನ್ಸ್‌ ವಿಭಾಗದ ಎಸ್‌ಪಿಯಾಗಿ ನಿವೃತ್ತರಾಗಿದ್ದ ವೈ. ಗಂಗೀರೆಡ್ಡಿ ಅವರಿಗೆ ಎಸ್‌ಪಿಯಾಗಿ ಪದೋನ್ನತಿ ನೀಡಿ ಪೂರ್ವಾನ್ವಯವಾಗುವಂತೆ ಆದೇಶವಾಗಿದೆ.

Advertisement

ಸರಕಾರದ ಒಳಾಡಳಿತ ಇಲಾಖೆಯ ಪೊಲೀಸ್‌ ಸೇವೆಗಳ ವಿಭಾಗದ ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಎನ್‌.ಆರ್‌. ಅವರು ಜು.3ರಂದು ರಾಜ್ಯಪಾಲರ ಆದೇಶ ಅನುಸಾರ ಆದೇಶ ಹೊರಡಿಸಿದ್ದಾರೆ.

ಡಿವೈಎಸ್‌ಪಿ ವೃಂದದ ಸೇವಾ ಜ್ಯೇಷ್ಠತೆಯಲ್ಲಿ ಗಂಗೀರೆಡ್ಡಿ ಅವರಿಗಿಂತ ಕಿರಿಯರಾದ ಮಲ್ಲಿಕ್‌ ಸಿ. ಅವರಿಗೆ ಎಸ್‌ಪಿ ಹುದ್ದೆಗೆ ಭಡ್ತಿ ನೀಡಿದ್ದರಿಂದ 2021ರ ಎ. 6ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರುವಂತೆ ರಾಜ್ಯ ಸಿವಿಲ್‌ ಸೇವಾ (ಮುಂಭಡ್ತಿ, ವೇತನ, ಪಿಂಚಣಿ) ನಿಯಮದಂತೆ ಎಸ್‌ಪಿ (ಸಿವಿಲ್‌, ನಾನ್‌ ಐಪಿಎಸ್‌) ಹುದ್ದೆಗೆ ಮುಂಭಡ್ತಿ ನೀಡಿ ಆದೇಶ ಹೊರಡಿಸಿದ್ದಾರೆ.
ಗಂಗೀರೆಡ್ಡಿ ಅವರು ಕರಾವಳಿ ಕಾವಲು ಪಡೆಯ (ಸಿ.ಎಸ್‌.ಪಿ.) ಇನ್‌ಸ್ಪೆಕ್ಟರ್‌ ಆಗಿ 11 ವರ್ಷಗಳ ಬಳಿಕ ಡಿವೈಎಸ್‌ಪಿ ಆಗಿ ಪದೋನ್ನತಿಯಾಗಿದ್ದರು.

2023ರಲ್ಲಿ ಎಸ್‌ಪಿ ಆಗಿದ್ದರು. ಅದಕ್ಕೂ ಮೊದಲು ಬೆಳ್ತಂಗಡಿಯಲ್ಲಿ ಅವರು ಇನ್‌ಸ್ಪೆಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾಗ ಆದಾಯ ಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದ ಮೇಲೆ 2009ರಲ್ಲಿ ಲೋಕಾಯುಕ್ತ ಪೊಲೀಸರಿಂದ ದಾಳಿಗೆ ಒಳಗಾಗಿ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಶಿಕ್ಷೆಗೆ ಒಳಗಾಗಿದ್ದರು. ಆ ಪ್ರಕರಣವನ್ನು ರಾಜ್ಯ ಉಚ್ಚ ನ್ಯಾಯಾಲಯ ಖುಲಾಸೆಗೊಳಿಸಿ ಆದೇಶ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next