Advertisement

ಯುವಕನ ಅಪಹರಣ: ನಿವೃತ್ತ ಸುಬೇದಾರ್‌, ಪುತ್ರನಿಗೆ ಆರು ವರ್ಷ ಜೈಲು

12:27 PM Sep 01, 2018 | udayavani editorial |

ಮುಜಫ‌ರನಗರ : ಯುವಕನೊಬ್ಬನನ್ನು ಅಪಹರಿಸಿದ ಅಪರಾಧಕ್ಕಾಗಿ ಓರ್ವ ನಿವೃತ್ತ ಸೇನಾ ಸುಬೇದಾರ್‌ ಮತ್ತು ಆತನ ಪುತ್ರನಿಗೆ ಇಲ್ಲಿನ ತ್ವರಿತ ನ್ಯಾಯ ತೀರ್ಮಾನದ ನ್ಯಾಯಾಲಯ ಆರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

Advertisement

ನ್ಯಾಯಾಧೀಶ ಶಬಿಸ್ತಾ ಅಕಿಲ್‌ ಅವರು ಅಪರಾಧಿ ನಿವೃತ್ತ ಸೇನಾ ಸುಬೇದಾರ್‌ ಶಂತು ಮತ್ತು ಆತನ ಪುತ್ರ ರಾಜ್‌ ಕುಮಾರ್‌ ಗೆ ಆರು ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದರು. 

ಸರಕಾರಿ ವಕೀಲ ಆನೋದ್‌ ಬಲ್ಯಾನ್‌ ಅವರು, ಆರೋಪಿಗಳು ನೀರಜ್‌ ಎಂಬ ಯುವಕನನ್ನು ಅಪಹರಿಸಿದ್ದರು ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next