Advertisement

Haryana ತನ್ನದೇ ಕುಟುಂಬದ 6 ಮಂದಿ ಕೊಲೆಗೈದ ನಿವೃತ್ತ ಯೋಧ!

11:43 PM Jul 22, 2024 | Team Udayavani |

ಅಂಬಾಲ: ನಿವೃತ್ತ ಸೈನಿಕರೊಬ್ಬರು ತಮ್ಮ ತಾಯಿ, ಸೋದರಳಿಯ, ಸೊಸೆ ಸೇರಿದಂತೆ ತಮ್ಮದೇ ಕುಟುಂಬದ 6 ಮಂದಿ ಯನ್ನು ಹತ್ಯೆಗೈದ ಘಟನೆ ಹರಿಯಾಣದ ನಾರಯಣಗಡದಲ್ಲಿ ನಡೆದಿದೆ.

Advertisement

ಭೂಷಣ್‌ ಕುಮಾರ್‌ ತಮ್ಮ ಕುಟುಂಬದವರೆಲ್ಲರೂ ನಿದ್ರಿಸುತ್ತಿದ್ದ ವೇಳೆ ಕೊಡಲಿಯಿಂದ ಕೊಚ್ಚಿ 6 ಮಂದಿಯನ್ನು ಭೀಕರವಾಗಿ ಕೊಂದಿದ್ದಾರೆ. ಬಳಿಕ ದೇಹಗಳನ್ನು ಸುಟ್ಟು ಹಾಕುವ ಪ್ರಯತ್ನ ಮಾಡಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ ಇಬ್ಬರು ಸಹೋದರರ ನಡುವಿನ ಆಸ್ತಿ ವಿವಾದದ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next