Advertisement

ಮಕರಜ್ಯೋತಿ: ಪಂಪಾಗೆ ಖಾಸಗಿ ವಾಹನಗಳಿಗೆ ನಿರ್ಬಂಧ

09:14 AM Jan 16, 2020 | Mithun PG |

ಶಬರಿಮಲೆ: ಶಬರಿಮಲೆಯಲ್ಲಿ ಇಂದು ಸಂಜೆ ಮಕರಜ್ಯೋತಿ‌ ದರ್ಶನವಾಗುವ ಹಿನ್ನೆಲೆಯಲ್ಲಿ ಎಲ್ಲಾ ಖಾಸಗಿ ವಾಹನಗಳನ್ನು ಪಂಪಾಗೆ ಹೋಗುವುದನ್ನು ನಿರ್ಬಂಧಿಸಲಾಗಿದೆ.

Advertisement

ಎಲ್ಲಾ ವಾಹನಗಳು ನೀಲಕ್ಕಲ್ ಶಿವ ದೇವಸ್ಥಾನದ ಸಮೀಪದಲ್ಲಿರುವ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಬೇಕಿದೆ. 1 ರಿಂದ 12 ವಿಭಾಗಗಳನ್ನು ಮಾಡಲಾಗಿದ್ದು, ಕಾರು, ವ್ಯಾನ್, ಬಸ್ ಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಮೇಲಿನ ವಿಭಾಗಗಳಲ್ಲಿ ವಿಂಗಡಿಸಲಾಗಿದೆ.

ವಾಹನಗಳ ದಟ್ಟನೆ  ಹೆಚ್ಚಳವಾಗಿದ್ದು ಪರಿಣಾಮವಾಗಿ, ಬೆಳಿಗ್ಗೆ 11 ಗಂಟೆಯ ನಂತರ ನಿಲಕ್ಕಲ್‌ನಿಂದ ಖಾಸಗಿ ವಾಹನಗಳನ್ನು ಪಂಪಾಗೆ ಅನುಮತಿಸಲಾಗುವುದಿಲ್ಲ. ನೀಲಕ್ಕಲ್ ನಿಂದ ಪಂಪಾವರೆಗೆ  ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾತ್ರ ಇದ್ದು,ಈ ರಸ್ತೆಯಲ್ಲಿ ತುರ್ತು ಸೇವೆಯ ವಾಹನ ಹಾಗೂ ಕೇರಳ ರಾಜ್ಯ ಸಾರಿಗೆ ವಾಹನಗಳು ಮಾತ್ರ ಓಡಾಟ ನಡೆಸಲು ಅವಕಾಶ ನೀಡಲಾಗಿದೆ.

ಈಗಾಗಲೇ ಪೊಲೀಸ್ ಇಲಾಖೆಯು ಈ ಕುರಿತು ನೀಲಕ್ಕಲ್ ನಲ್ಲಿ  ಭಕ್ತಾಧಿಗಳಿಗೆ ಸೂಚನೆ ನೀಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಖಾಸಗಿ ವಾಹನಗಳ ಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಪತ್ತನಂತಿಟ್ಟ ಜಿಲ್ಲಾಧಿಕಾರಿ ಪಿ.ಬಿ.ಕೃಷ್ಣನ್ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next