Advertisement

ಕೆಜಿಎಫ್ಗೆ ತಡೆ, ಬಿಡುಗಡೆ ಪಕ್ಕಾ

06:00 AM Dec 21, 2018 | Team Udayavani |

ಬೆಂಗಳೂರು: ದೇಶಾದ್ಯಂತ ಶುಕ್ರವಾರ ತೆರೆ ಕಾಣಬೇಕಾಗಿದ್ದ “ಕೆಜಿಎಫ್’ ಚಿತ್ರ ಬಿಡುಗಡೆ ಮಾಡದಂತೆ ನಗರದ ಸಿವಿಲ್‌ ನ್ಯಾಯಾಲಯ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಚಿತ್ರ ಚಿಡುಗಡೆಗೆ ತಡೆ ಕೋರಿ ಜಿ. ವೆಂಕಟೇಶ್‌ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನಗರದ 10ನೇ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಎಂ. ಪಂಚಾಕ್ಷರಿ ಅವರು ಮಧ್ಯಂತರ ತಡೆ ನೀಡಿದ್ದು, ವಿಚಾರಣೆಯನ್ನು ಜ.7ಕ್ಕೆ ಮುಂದೂಡಿದ್ದಾರೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ನಿರ್ಮಾಪಕ ವಿಜಯ್‌ ಕಿರ ಗಂದೂರು, ಪೂರ್ವನಿಗದಿಯಂತೆ ಶುಕ್ರವಾರ ಚಿತ್ರ ಬಿಡುಗಡೆಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಯಶ್‌ ನಟನೆಯ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಗೊಳ್ಳಲು ಶುಕ್ರವಾರ ದಿನ ನಿಗದಿಯಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next